ಮಂಗಳ ಮುದ್ದುಮಾದಪ್ಪ ಅವರ ವಚನ ಗುಮ್ಮಟ ಡಾ. ಫ.ಗು. ಹಳಕಟ್ಟಿಯವರ ಜೀವನ ಚರಿತ್ರೆ ಕೃತಿ ಬಿಡುಗಡೆ

ಮೈಸೂರು: ವಚನ ಸಾಹಿತ್ಯದ ತಾಡೋಲೆಗಳಿಗಾಗಿ ಡಾ. ಫ.ಗು ಹಳಕಟ್ಟಿಯವರು ಹುಡುಕಾಡದ ಊರುಗಳಿಲ್ಲ. ತಡಕಾಡದ ಕೇರಿಗಳಿಲ್ಲ. ಅನ್ವೇಷಣೆಗೈಯದ ಆಲಯಗಳಿಲ್ಲ. ಸಂಶೋಧನೆಗೈಯದ ಸ್ಥಳಗಳಿಲ್ಲ. ವಚನ ಸಾಹಿತ್ಯ ಸಂರಕ್ಷಣೆ, ಸಂಶೋಧನೆ ಮತ್ತು ಪ್ರಸಾರದಲ್ಲಿ ಅಗ್ರಗಣ್ಯರಾಗಿದ್ದ ವಚನ ಗುಮ್ಮಟ ಡಾ. ಫ.ಗು. ಹಳಕಟ್ಟಿ ಅವರ ಸಮಗ್ರ ಜೀವನ, ಚಿಂತನೆ, ಸಂಶೋಧನಾ ಸೇವೆ ಮತ್ತು ವಚನ ಸಾಹಿತ್ಯದ ಮೇಲಿನ ಅವಿರತ ಸಾಧನೆಯನ್ನು ಒಳಗೊಂಡ ಮಹತ್ವದ ಜೀವನಚರಿತ್ರೆ ಕೃತಿಯನ್ನು ಮಂಗಳ ಮುದ್ದುಮಾದಪ್ಪ ಅವರು ರಚಿಸಿದ್ದಾರೆ. ಈ ಕೃತಿಯನ್ನು ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಪ್ರಕಟಿಸಲಾಗುತ್ತಿದೆ. ಡಾ. … Continue reading ಮಂಗಳ ಮುದ್ದುಮಾದಪ್ಪ ಅವರ ವಚನ ಗುಮ್ಮಟ ಡಾ. ಫ.ಗು. ಹಳಕಟ್ಟಿಯವರ ಜೀವನ ಚರಿತ್ರೆ ಕೃತಿ ಬಿಡುಗಡೆ