LatestMysore

ಸಾ.ರಾ. ಮಹೇಶ್ ಅವರ 60ನೇ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ವಿವಿಧೆಡೆ ಪೂಜೆ ಸಲ್ಲಿಸಿ ಶುಭಹಾರೈಕೆ

 ಕೆ.ಆರ್.ನಗರ(ಸಂಘಟನೆ ಮಂಜುನಾಥ್):  ಮಾಜಿ ಸಚಿವ ಸಾ.ರಾ. ಮಹೇಶ್ ಅವರ 60ನೇ ಹುಟ್ಟುಹಬ್ಬದ ಹಿನ್ನೆಲೆ ಮೈಸೂರಿನ ಶ್ರೀಚಾಮುಂಡೇಶ್ವರಿ ದೇಗುಲ. ಚುಂಚನಕಟ್ಟೆಶ್ರೀರಾಮ ದೇಗುಲ ಸೇರಿದಂತೆ ಹೋಬಳಿಯ ವಿವಿಧ ದೇವಾಲಯಗಳಲ್ಲಿ ಜೆಡಿಎಸ್ ಮುಖಂಡ ಹಳೆಯೂರು ಮಧುಚಂದ್ರ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.

ದೇವರು ಆಯುಷ್ಯ ಹೆಚ್ಚಿನ ಆರೋಗ್ಯ ಹಾಗೂ ಅಧಿಕಾರ ನೀಡಿ ರಾಜಕೀಯ ಕ್ಷೇತ್ರದಲ್ಲಿ ಉತ್ತಮವಾಗಿ ಬೆಳೆದು ದೀನ ದಲಿತರ ಬಡಜನತೆಯ ಬಾಳಿಗೆ ಬೆಳಕಾಗಲಿ ಎಂದು ಪ್ರಾರ್ಥಿಸಿದರು. ದಮ್ಮನಹಳ್ಳಿ ಜಗದೀಶ್, ಲೋಕೇಶ್,  ಯುವ ಮುಖಂಡ ಹಳಿಯೂರು  ಶ್ರೀಧರ್ ಗೌಡ  ಪ್ರವೀಣ್, ಮಿತ್ರ, ಇತರರು ಇದ್ದರು.

admin
the authoradmin

Leave a Reply