ಅಪೋಲೋ ಹಾಸ್ಪಿಟಲ್ಸ್ ನಿಂದ ‘ಆಲ್ವೇಸ್ ಓಪನ್. ಆಲ್ವೇಸ್ ಹಿಯರ್’ ಜಾಗತಿಕ ಆರೋಗ್ಯಸೇವೆಯಲ್ಲಿ ಕ್ರಾಂತಿ

ನವದೆಹಲಿ: ಅಪೋಲೋ ಹಾಸ್ಪಿಟಲ್ಸ್ ಇಂದು ‘ಆಲ್ವೇಸ್ ಓಪನ್. ಆಲ್ವೇಸ್ ಹಿಯರ್ (ಸದಾ ತೆರೆದಿರುತ್ತೇವೆ, ಸದಾ ಇಲ್ಲಿರುತ್ತೇವೆ) ಎಂಬ ವಿನೂತನ ಉಪಕ್ರಮವನ್ನು ಪ್ರಾರಂಭಿಸಿದೆ. ಇದು ಭಾನುವಾರ ಸೇರಿದಂತೆ ವಾರದ ಏಳು ದಿನಗಳಲ್ಲೂ ದಿನನಿತ್ಯದ ಮತ್ತು ಯೋಜಿತ ಆರೋಗ್ಯ ಸೇವೆಗಳನ್ನು ಲಭ್ಯವಾಗುವಂತೆ ಮಾಡುತ್ತಿದ್ದು ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಅಪೋಲೋ ಸಂಸ್ಥೆಯ ತುರ್ತು ಚಿಕಿತ್ಸೆ, ಮತ್ತು ರೋಗಿಗಳ ದಾಖಲಾತಿ ಸೇವೆಗಳು ಯಾವಾಗಲೂ 24×7 ಲಭ್ಯವಿರುತ್ತವೆ. ಈ ಹೊಸ ಉಪಕ್ರಮವು ಹೊರರೋಗಿ ಸಮಾಲೋಚನೆಗಳು, ರೋಗನಿರ್ಣಯ ಪರೀಕ್ಷೆಗಳು, ರೋಗತಡೆಯ ಆರೋಗ್ಯ ತಪಾಸಣೆಗಳು, ಫಾಲೋ-ಅಪ್ ಸಲಹೆಗಳು ಮತ್ತು ನಿಗದಿತ ಚಿಕಿತ್ಸೆಗಳನ್ನು ಭಾನುವಾರವೂ ವಿಸ್ತರಿಸುತ್ತದೆ. ಇದು ರೋಗಿಗಳು ಮತ್ತು ಅವರ ಕುಟುಂಬದವರು ಕೆಲಸದ ದಿನಗಳಿಗಾಗಿ ಕಾಯದೆ ಸಮಯಕ್ಕೆ ಸರಿಯಾಗಿ ಆರೈಕೆ ಪಡೆಯಲು ನೆರವಾಗುತ್ತದೆ.
ಅಪೋಲೋ ಸಂಸ್ಥೆಯ ‘ಹೆಲ್ತ್ ಆಫ್ ದಿ ನೇಷನ್ 2026’ ವರದಿಯು ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಚಯಾಪಚಯ ಅಸ್ವಸ್ಥತೆಗಳಂತಹ ಜೀವನಶೈಲಿ ಕಾಯಿಲೆಗಳ ಹೆಚ್ಚುತ್ತಿರುವ ಹೊರೆಯನ್ನು ತೋರಿಸಿದೆ. ಇವು ತಮ್ಮ ಅತ್ಯಂತ ಉತ್ಪಾದನಾ ವರ್ಷಗಳಲ್ಲಿರುವ ಭಾರತೀಯರ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತಿವೆ. ಈ ವರದಿಯು ಮತ್ತಷ್ಟು ಸ್ಪಷ್ಟಪಡಿಸುವುದೇನೆಂದರೆ, ಭಾರತದ ಅಪೋಲೋ ಸಂಸ್ಥೆಯ ಜಾಲದಾದ್ಯಂತ 2.5 ಮಿಲಿಯನ್ಗಿಂತಲೂ ಹೆಚ್ಚು ವ್ಯಕ್ತಿಗಳಲ್ಲಿ ನಡೆಸಿದ ಪರೀಕ್ಷೆಗಳ ಅನ್ವಯ ಒಂದು ಮೌನ ಸಾಂಕ್ರಾಮಿಕ ಹೆಚ್ಚಾಗುತ್ತಿದೆ.
ಇಲ್ಲಿ ಲಕ್ಷಾಂತರ ಜನರು ಯಾವುದೇ ಬಾಹ್ಯ ರೋಗಲಕ್ಷಣಗಳನ್ನು ತೋರಿಸದಿದ್ದರೂ, ರೋಗ ಪತ್ತೆಯಾಗದೆ ದೀರ್ಘಕಾಲದ ಕಾಯಿಲೆಗಳೊಂದಿಗೆ ಬದುಕುತ್ತಿದ್ದಾರೆ. ಯಾವುದೇ ಲಕ್ಷಣಗಳಿಲ್ಲದಿದ್ದರೂ ಸುಮಾರು ಶೇ.26 ರಷ್ಟು ಜನರು ಅಧಿಕ ರಕ್ತದೊತ್ತಡ ಮತ್ತು ಶೇ.23 ರಷ್ಟು ಜನರು ಮಧುಮೇಹವನ್ನು ಹೊಂದಿರುವುದು ಕಂಡುಬಂದಿದೆ.

ಇದು ರೋಗಲಕ್ಷಣಗಳು ಕಾಣಿಸಿಕೊಂಡಾಗಷ್ಟೇ ಚಿಕಿತ್ಸೆ ಪಡೆಯುವ ಆರೋಗ್ಯ ರಕ್ಷಣಾ ಮಾದರಿಯು ಇನ್ನು ಮುಂದೆ ಸೂಕ್ತವಲ್ಲ ಎನ್ನುವುದನ್ನು ದೃಢೀಕರಿಸುತ್ತದೆ. ಆಲ್ವೇಸ್ ಓಪನ್. ಆಲ್ವೇಸ್ ಹಿಯರ್ ಉಪಕ್ರಮವು, ವಿಳಂಬವು ಅಪಾಯವಾಗಿ ಮಾರ್ಪಡುವ ಮೊದಲು ರೋಗಿಗಳಿಗೆ ತಮ್ಮ ಆರೋಗ್ಯದ ಕಡೆಗೆ ಗಮನಹರಿಸಲು ಇನ್ನೂ ಒಂದು ದಿನವನ್ನು ನೀಡುವ ಮೂಲಕ ಈ ಕೊರತೆಯನ್ನು ನಿವಾರಿಸುತ್ತದೆ.
ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ ಅವರು, “ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಅಪೋಲೋ ಸಂಸ್ಥೆಯು ಆರೋಗ್ಯ ಸೇವೆ ಎಂದರೆ ಕೇವಲ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲ, ಆರೋಗ್ಯವನ್ನು ಕಾಪಾಡುವುದು ಮತ್ತು ರೋಗಗಳನ್ನು ತಡೆಗಟ್ಟುವುದು ಎಂದು ನಂಬಿದೆ. ‘ಆಲ್ವೇಸ್ ಓಪನ್. ಆಲ್ವೇಸ್ ಹಿಯರ್.’ ಎಂಬುದು ಆ ಭರವಸೆಯ ಮುಂದುವರಿದ ಭಾಗವಾಗಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ನಾವು ನೀಡುವ ಸೇವೆಯ ಮುದ್ರೆಯಾಗಿದೆ ಎಂದರು.
1983 ರಿಂದ ಅಪೋಲೋ ಭಾರತೀಯ ಆರೋಗ್ಯ ಸೇವಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ: ಭಾರತದ ಮಣ್ಣಿನಲ್ಲಿ ಈ ಮೊದಲು ಎಂದೂ ನಡೆದಿರದ ಹೃದಯ ಶಸ್ತ್ರಚಿಕಿತ್ಸೆಗಳು; ದಕ್ಷಿಣ ಏಷ್ಯಾದ ಮೊದಲ ಪ್ರೋಟಾನ್ ಕ್ಯಾನ್ಸರ್ ಸೆಂಟರ್; 3 ಕೋಟಿಗೂ ಹೆಚ್ಚು ಜನರನ್ನು ತಲುಪಿರುವ ‘ಮಾಸ್ಟರ್ ಹೆಲ್ತ್ ಚೆಕ್’ ಮೂಲಕ ಚಾಲನೆ ನೀಡಿದ ರೋಗತಡೆಯ ಆರೈಕೆ; ಮತ್ತು ವಿಶ್ವದ ಅತ್ಯಂತ ಬ್ಯುಸಿಯಾದ ಘನ-ಅಂಗಾಂಗ ಕಸಿ (ಸಾಲಿಡ್-ಆರ್ಗನ್ ಟ್ರಾನ್ಸ್ಪ್ಲಾಂಟ್) ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಅಪೋಲೋ ಪ್ರೋಹೆಲ್ತ್ ಎಂಬುದು ಮೊದಲ ಎಐ-ಸನ್ನದ್ಧ ಅಪಾಯದ ಮುನ್ಸೂಚನೆ ಮತ್ತು ವಿಶ್ಲೇಷಣಾ ವ್ಯವಸ್ಥೆಯಾಗಿದ್ದು, ಇದು ವ್ಯಕ್ತಿಗಳು ಆರೋಗ್ಯ ಅಪಾಯಗಳನ್ನು ಮೊದಲೇ ಗುರುತಿಸಲು ಮತ್ತು ಸಮಸ್ಯೆ ಉಲ್ಬಣಗೊಳ್ಳುವ ಮೊದಲು ಸೂಕ್ತ ಕ್ರಮ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದರು.

ಅಪೋಲೋ ಹಾಸ್ಪಿಟಲ್ಸ್ನ ಎಕ್ಸಿಕ್ಯೂಟಿವ್ ಚೇರ್ ಪರ್ಸನ್ ಡಾ. ಪ್ರೀತಾ ರೆಡ್ಡಿ, ಜನರು ತಮ್ಮ ಜೀವನದ ಶೈಲಿಗೆ ಹಾಗೂ ಸಮಯಕ್ಕೆ ಸೂಕ್ತವಾಗಿ ಹೊಂದುವಂತೆ ವೈದ್ಯಕೀಯ ಆರೈಕೆಯನ್ನು ಪಡೆಯಲು ಸಾಧ್ಯವಾಗಬೇಕು. ಉದ್ಯೋಗಿಗಳು, ಆರೈಕೆದಾರರು ಮತ್ತು ಹಲವು ಜವಾಬ್ದಾರಿಗಳನ್ನು ಸರಿದೂಗಿಸುವ ಕುಟುಂಬಗಳಿಗೆ—ವಿಶೇಷವಾಗಿ ಭಾನುವಾರದಂದು ವೈದ್ಯರನ್ನು ಸಂಪರ್ಕಿಸಲು, ಆರೋಗ್ಯ ತಪಾಸಣೆ ಪೂರ್ಣಗೊಳಿಸಲು ಅಥವಾ ತಡೆರಹಿತವಾಗಿ ಫಾಲೋ-ಅಪ್ ಆರೈಕೆಯನ್ನು ಮುಂದುವರಿಸಲು ಅವಕಾಶ ನೀಡುವುದು ಅರ್ಥಪೂರ್ಣ ಬದಲಾವಣೆಯನ್ನು ತರಬಲ್ಲದು ಎಂದರು.
ಆಸ್ಪತ್ರೆಗಳ ನಿರ್ದಿಷ್ಟ ವೇಳಾಪಟ್ಟಿಗಳು ಮತ್ತು ಸೇವೆಗಳ ಲಭ್ಯತೆಗೆ ಒಳಪಟ್ಟು, ರೋಗಿಗಳು ಭಾನುವಾರದಂದೂ ಸಹ ತಜ್ಞ ವೈದ್ಯರ ಸಮಾಲೋಚನೆಗಳು, ರೋಗತಡೆಯ ಆರೋಗ್ಯ ತಪಾಸಣೆಗಳು, ರೋಗನಿರ್ಣಯ ಪರೀಕ್ಷೆಗಳು, ಫಾಲೋ-ಅಪ್ ಸಮಾಲೋಚನೆಗಳು ಮತ್ತು ನಿಗದಿತ ಚಿಕಿತ್ಸಾ ಪ್ರಕ್ರಿಯೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದರರ್ಥ ಉದ್ಯೋಗಿಯೊಬ್ಬರು ಕೆಲಸದ ದಿನಗಳಲ್ಲಿ ರಜೆ ತೆಗೆದುಕೊಳ್ಳದೆ ಆರೋಗ್ಯ ತಪಾಸಣೆ ಪೂರ್ಣಗೊಳಿಸಬಹುದು, ಕುಟುಂಬದವರು ವಯಸ್ಸಾದ ಪೋಷಕರನ್ನು ಯೋಜಿತ ರೋಗನಿರ್ಣಯ ಪರೀಕ್ಷೆಗೆ ಕರೆದುಕೊಂಡು ಬರಬಹುದು ಮತ್ತು ಫಾಲೋ-ಅಪ್ ಸಮಾಲೋಚನೆಗಾಗಿ ಕಾಯುತ್ತಿರುವ ರೋಗಿಯು ಸೋಮವಾರದವರೆಗೆ ಕಾಯಬೇಕಾಗಿಲ್ಲ ಎಂದಿದ್ದಾರೆ







