CinemaLatest

ಡಾ.ಶಿವರಾಮಕಾರಂತರ ಸಿನಿಮಾ ಬದುಕು ಹೇಗಿತ್ತು? ಅವರು ಸಾಧನೆಯ ಶಿಖರವೇರಿ ವಿಜೃಂಭಿಸುತ್ತಾ ತುಂಬು ಜೀವನ ಕಳೆದಿದ್ದು ಹೇಗೆ?

ಡಾ.ಶಿವರಾಮಕಾರಂತರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಕಾರಂತಜ್ಜ ಎಂದೇ ಕರೆಯಲ್ಪಡುತ್ತಿದ್ದ ಅವರ ಬಗ್ಗೆ ಅವರ ಸಾಹಿತ್ಯದ ಕುರಿತಂತೆ ಬಹಳಷ್ಟು ತಿಳಿದುಕೊಂಡಿದ್ದರೂ ಅವರು ಸಿನಿಮಾರಂಗದಲ್ಲಿ ಕೆಲಸ ಮಾಡಿದ್ದರು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಅವರು ಸಕಲಕಲಾವಲ್ಲಭರು ಎಂಬುದು ಅವರ ಬಗ್ಗೆ ತಿಳಿಯುತ್ತಾ ಹೋದಂತೆ ಗೊತ್ತಾಗಿ ಬಿಡುತ್ತದೆ. ಅವರು ಓದಿದ್ದು ಕಡಿಮೆ ಇರಬಹುದು ಆದರೆ ಅವರ ಜ್ಞಾನಕ್ಕೆ ಎಂಟು ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವಿಗಳು ಹುಡಕಿಕೊಂಡು ಬಂದವು ಎಂದರೆ ಅಚ್ಚರಿಯಾಗುತ್ತದೆ.

ಎಂದಿನಂತೆ ಅವರ ಹುಟ್ಟು, ಬಾಲ್ಯ, ಬದುಕು, ಸಾಹಿತ್ಯ ಮಾತ್ರವಲ್ಲದೆ ಬಣ್ಣದ ಬದುಕಿನ ಬಗ್ಗೆಯೂ ತೆರೆದಿಡುವ ಕೆಲಸವನ್ನು ಕುಮಾರಕವಿ ನಟರಾಜ ಅವರು ಮಾಡಿದ್ದಾರೆ. ಹಾಗಾದರೆ ಕಾರಂತರು ಸಾಹಿತ್ಯದಾಚೆಗೂ ಬಣ್ಣದ ಬದುಕಿನಲ್ಲಿ ಹೇಗೆ ತೊಡಗಿಸಿಕೊಂಡಿದ್ದರು ಎಂಬುದರ ಬಗ್ಗೆ ಇಲ್ಲಿ ಒಂದಷ್ಟು ವಿಚಾರಗಳಿವೆ ತಪ್ಪದೆ ಓದಿ ಬಿಡಿ…

ಕಡಲತೀರ ಭಾರ್ಗವ, ಯಕ್ಷಗಾನ ಬ್ರಹ್ಮ, ಜ್ಞಾನಪೀಠ ಪುರಸ್ಕೃತ, ಡಾ.ಕೋಟ ಶಿವರಾಮ ಕಾರಂತರ (Dr Shivaramakaranta) ಬದುಕಿನ ಬಗ್ಗೆ ಅಧ್ಯಯನ ಮಾಡಿದರೆ ಅವರ ಬದುಕೇ ತೆರೆದ ಪುಸ್ತಕದಂತೆ ಗೋಚರಿಸುತ್ತದೆ. ಹೀಗಾಗಿ ಅವರ ಬಗ್ಗೆ ಬಾಲ್ಯದಿಂದಲೇ ತಿಳಿಯುತ್ತಾ ಹೋದರೆ ಅದೆಷ್ಟೋ ಜನರಿಗೆ ಅವರು ಸ್ಪೂರ್ತಿಯಾಗುತ್ತಾರೆ. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಶಿಖರವೇರಿ ವಿಜೃಂಭಿಸುತ್ತಾ ಬದುಕುವುದು ಕೆಲವರಿಗೆ ಮಾತ್ರ ಸಾಧ್ಯ. ಅಂತಹವರಲ್ಲಿ ಕಾರಂತರು ಒಬ್ಬರಾಗಿದ್ದಾರೆ.

ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ 10.10.1902ರಂದು ಜನಿಸಿದರು. ಬಾಲಕನಿದ್ದಾಗಲೇ ನೃತ್ಯ ಮತ್ತು ಅಭಿನಯ ಕಲೆಯನ್ನು ಕರತಲಾಮಲಕ ಮಾಡಿಕೊಂಡ ಇವರು ಬಾಲ್ಯ ಜೀವನದಲ್ಲಿ ಲೋಯರ್ ಸೆಕೆಂಡರಿವರೆಗೆ ಮಾತ್ರ ವಿದ್ಯಾಭ್ಯಾಸ ಕಲಿತರು. ಕಾಲ ಕ್ರಮೇಣ ತನ್ನ ಅಪ್ರತಿಮ ಜ್ಞಾನ ಸಂಪಾದನೆಯಿಂದ ಮತ್ತು ಸರ್ವತೋಮುಖ ಸೇವಾಕಾರ್ಯ ಸಾಧನೆಯಿಂದ 8 ವಿಶ್ವವಿದ್ಯಾಲಯಗಳಿಂದ ಗೌ.ಡಾಕ್ಟರೆಟ್ ಪಡೆದರು. ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು.

“ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ” ಎಂದು ಘೋಷಿಸಿದ ಕಾರಂತಜ್ಜನಿಗೆ ಮಕ್ಕಳೆಂದರೆ ಪರಮಪ್ರಾಣ, ಯಕ್ಷಗಾನವೆಂದರೆ ಪಂಚಪ್ರಾಣ. ಈ ಕಾರಣಕ್ಕೇ  ತರಂಗ ವಾರಪತ್ರಿಕೆಯಲ್ಲಿ “ಬಾಲವನದಲ್ಲಿ ಕಾರಂತಜ್ಜ” ಅಂಕಣದ ಲೇಖನಗಳ ಮೂಲಕ ನಾಡಿನಾದ್ಯಂತ ಮಕ್ಕಳ ಪ್ರೀತಿ ಗಳಿಸಿದರು. ಜ್ಞಾನಪೀಠ, ಪದ್ಮಭೂಷಣ, ಪಂಪಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಮುಂತಾದವು ಇವರನ್ನು ಹುಡುಕಿ ಬಂದಿದ್ದು ಇತಿಹಾಸ…

ಅಗಾಧ ಪರಿಸರಪ್ರೇಮಿ ಕಾರಂತರು “ಹಸಿರೇ ಉಸಿರು” ಎಂಬ ಹೊಸ ಪ್ರಕ್ರಿಯೆಗೆ ನಾಂದಿ ಹಾಡುವ ಮತ್ತು ಮರಗಿಡವನ್ನು ಕಡಿಯಲೇ ಬಾರದೆಂಬ ಎಚ್ಚರಿಕೆ ಸೂಚಿಸುವ ಮೂಲಕ ಕ್ರಾಂತಿ ಪೂರ್ಣವಾದ “ಗಿಡಮರ ಅಪ್ಪಿಕೋ ಚಳುವಳಿ” ಸೃಜಿಸಿ ಅದರ ಪ್ರಮುಖ ರೂವಾರಿಯಾದರು. ತತ್ಪರಿಣಾಮವಾಗಿ ಸರ್ಕಾರದ ಮತ್ತು ಸಮಾಜದ ನಿಷ್ಠುರ ಎದುರಿಸಬೇಕಾಯ್ತು. ಆದರೂ ಲಕ್ಷಾಂತರ ವೃಕ್ಷಗಳನ್ನು ಸಂರಕ್ಷಿಸಿದ ನೈಜ ಪರಿಸರವಾದ ಪಿತಾಮಹ ಎನಿಸಿದ್ದು ವಿಶೇಷವೇ ಸರಿ!

ಶಿವರಾಮಕಾರಂತರ ಕರ್ಮಭೂಮಿ ಪುತ್ತೂರಿನ ‘ಕಾರಂತ ಬಾಲವನ’(karanta balavana) ಸೇರಿದಂತೆ ‘ಕಾರಂತ ಕಲಾಗ್ಯಾಲರಿ’, ಗ್ರಂಥಾಲಯ, ವಸ್ತು ಸಂಗ್ರಹಾಲಯ, ನಾಟ್ಯಶಾಲೆ, ಯಕ್ಷಗಾನ ವಿದ್ಯಾಭ್ಯಾಸ-ತರಬೇತಿಶಾಲೆ, ರಂಗಮಂದಿರ, ಕ್ರೀಡಾಮೈದಾನ, ಉದ್ಯಾನವನ, ಕಲಾಮಂದಿರ ಹಾಗೂ ಈಜು ಕೊಳಗಳು. ಇವರ ಹೆಸರಿನಲ್ಲಿ ರಸ್ತೆ, ವೃತ್ತ, ವಸತಿಗೃಹ, ನಿವಾಸ ಬಡಾವಣೆಗಳಿವೆ. ಇದು ಅವರ ಸಾಧನೆಗೆ ಸಲ್ಲುವ ಗೌರವವಾಗಿದೆ.

ಕನ್ನಡ ಸಿನಿಲೋಕದ ಪಿತಾಮಹ: ಲೇಖನ- ಯಕ್ಷಗಾನ- ಸಿನಿಮ ಈ ಮೂರನ್ನೂ ವೃತ್ತಿ- ಪ್ರವೃತ್ತಿಯಾಗಿಸಿಕೊಂಡ ಸರಸ್ವತೀಪುತ್ರ. ಇವರು ಬರೆದ 42 ಕಾದಂಬರಿಗಳ ಪೈಕಿ 5 ಕೃತಿಯನ್ನಾಧರಿಸಿ ನಿರ್ಮಾಣಗೊಂಡ ಐದು ಸಿನಿಮಾಗಳು: ಚೋಮನದುಡಿ, ಬೆಟ್ಟದಜೀವ, ಕುಡಿಯರಕೂಸು, ಚಿಗುರಿದಕನಸು, ಮೂಕಜ್ಜಿಯಕನಸುಗಳು.  1930ರಲ್ಲಿ ‘ಡೊಮಿಂಗೊ’ ಎಂಬ English ಸೈಲೆಂಟ್ ಫಿಲಂ ನಿರ್ಮಿಸಿ-ನಿರ್ದೇಶಿಸಿ, ಚಿತ್ರೀಕರಿಸಿ-ಅಭಿನಯಿಸುವ ಮೂಲಕ ಭಾರತೀಯ ಬೆಳ್ಳಿತೆರೆಗೆ ಮಹತ್ತರ ಕೊಡುಗೆ ನೀಡಿದ ಪ್ರಪ್ರಥಮ ಕನ್ನಡಿಗನೆಂಬ ಕೀರ್ತಿಗೆ ಪಾತ್ರರಾದರು.

1931ರಲ್ಲಿ ಕನ್ನಡದ ಚೊಚ್ಚಲ ಮೂಕಿಚಿತ್ರ “ಭೂತರಾಜ್ಯ”ನಿರ್ಮಿಸಿ, ನಿರ್ದೇಶಿಸಿ, ನಟಿಸಿದ ಚಂದನವನದ ಮೊಟ್ಟಮೊದಲ ಚಿತ್ರ್ಯೋದ್ಯಮಿ ಎನಿಸಿ ವಿನೂತನ ದಾಖಲೆ ಸೃಷ್ಟಿಸಿದರು! ಇವರ ಸಮಕಾಲಿನರಾಗಿ ಮತ್ತೊಬ್ಬ ಪಿತಾಮಹ ಗುಬ್ಬಿವೀರಣ್ಣ, ಕನ್ನಡದ ಎರಡನೆಯ ಮೂಕಿಚಿತ್ರ “ಹರಿಮಾಯ” ವನ್ನು ಕನ್ನಡ ಬೆಳ್ಳಿತೆರೆಗೆ ಅರ್ಪಿಸಿದರು. ಇಂಥ ಮಹನೀಯರಿಂದ ಪ್ರಾರಂಭವಾದ ಕನ್ನಡ ಚಿತ್ರರಂಗವು ನಿಧಾನವಾಗಿ ಪ್ರವರ್ಧಮಾನಕ್ಕೆ ಬಂದುದು ಮರೆಯಲಾರದ ಇತಿಹಾಸ!

ಶಿವರಾಮ ಕಾರಂತರು ತಾವು ಬದುಕಿದ್ದ ತುಂಬು ಜೀವನಾವಧಿಯಲ್ಲಿ 95 ಸಂವತ್ಸರ ಕಂಡುಂಡರು. ಅನೇಕ ದೇಶ ಸುತ್ತಿ, ಕೋಶ ಓದಿ, ಅಸಾಮಾನ್ಯ ಅರಿವು ಸಂಪಾದಿಸಿದ ಕನ್ನಡ ಕುಲದೀಪಕ, ಮನುಷ್ಯ ಜನ್ಮದ ಸಮರ್ಥ ಸಾಧಕರಾದರು. ಡಾ.ಕಾರಂತಜ್ಜ ದಿನಾಂಕ 9ನೇ ಡಿಸೆಂಬರ್ 1997ರಂದು ದೈಹಿಕವಾಗಿ ನಿಧನಹೊಂದಿ ಪ್ರಪಂಚದಿಂದ ಲೌಕಿಕ ನೇಪಥ್ಯಕ್ಕೆ ಸರಿದರೂ ಓರ್ವ ಮಹಾತ್ಮರಾಗಿ ಇವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕಾರ್ಯಕ್ಷಮತೆ, ನಿಸರ್ಗ ಸಂರಕ್ಷಣೆಗೆ ಧಾರೆಎರೆದ ಅಪೂರ್ವ ಪರಿಶ್ರಮ, ಸಾಹಿತ್ಯಲೋಕಕ್ಕೆ ನೀಡಿದ ಅಮೋಘತ್ಯಾಗ ಹಾಗೂ ಸಿನಿಮಾ-ರಂಗಭೂಮಿ ಕ್ಷೇತ್ರಕ್ಕೆ ನೀಡಿದ ಅದ್ಭುತ ಕೊಡುಗೆ, ಇವೆಲ್ಲವೂ ಆಚಂದ್ರಾರ್ಕ ಅಜರಾಮರ!

ಇದು ಕಾರಂತರ ಸಿನಿಮಾಗಳು: 1)1930-ಡೊಮಿಂಗೊ:English Silentfilm, 2)1931-ಭೂತರಾಜ್ಯ : ಕನ್ನಡ ಮೂಕಿಚಿತ್ರ

admin
the authoradmin

4 Comments

  • I never knew that DR.SHIVARAM KARANT (karanthajja) was also one of the pioneers in KANNADA STAGEPLAY & FILMS 👍🙏👌🙏

  • I never knew that DR.SHIVARAM KARANT (karanthajja) was also one of the pioneers in KANNADA STAGEPLAY & FILMS 👍🙏👌🙏

  • ಬಹಳ ಉತ್ತಮ ಬರಹ ಮತ್ತು ಸಂಕ್ಷಿಪ್ತ ವಿವರ ಇರುವ ಉಪಯುಕ್ತ ಲೇಖನ. ಥ್ಯಾಂಕ್ಸ್ ಫಾರ್ both author and publisher

  • Wonderful article because we never knew that k shivarama karanthajja was also a filming actor, producer, director etc. thanks a lllottt

Leave a Reply