LatestMysore

ಹಾಡ್ಯ – ಗೊಲ್ಲರಕೊಪ್ಪಲು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ರವಿಶಂಕರ್  ಭೂಮಿಪೂಜೆ

ಹೊಸೂರು(ಸಂಘಟನೆ ಮಂಜುನಾಥ್): ಸಾಲಿಗ್ರಾಮ  ತಾಲೂಕು  ಹಾಡ್ಯ ಮತ್ತು ಗೊಲ್ಲರಕೊಪ್ಪಲು ಗ್ರಾಮದಲ್ಲಿ ಸುಮಾರು 4 ಕೋಟಿ ವೆಚ್ಚದಲ್ಲಿ ಗ್ರಾಮ ಪರಿಮಿತಿಯಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಹಾಡ್ಯ ವೃತ್ತದ ಬಳಿ ರಸ್ತೆ ಸುರಕ್ಷತಾ ಕಾಮಗಾರಿ ಮತ್ತು ವಿವಿಧ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಶಾಸಕರಾದ ಡಿ.ರವಿಶಂಕರ್ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ತಾಪಂ ಸದಸ್ಯ ಹಾಡ್ಯ ಮಹದೇವಸ್ವಾಮಿ, ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್ ಸಿ ಪ್ರಸಾದ್, ಹಾಡ್ಯ ನಾಗೇಶ್, ರಘು, ಮಹೇಶ್, ಮಲ್ಲಿಕಾರ್ಜುನ, ಡೈರಿ ಮಾದು, ಡೇರಿ ಅಧ್ಯಕ್ಷ ಹೆಚ್  ರಮೇಶ್, ರವಿ ಸಲೀಂ ನಾಡಪ್ಪನಹಳ್ಳಿ ನಾಗೇಶ್ ಅಶ್ವಥ್  ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want