ಸರಗೂರು: ಹಾರ್ಟ್ ಸಂಸ್ಥೆ ಮೈಸೂರು, ರೋಟರಿ ಕ್ಲಬ್ ಆಪ್ ಮೈಸೂರು ವೆಸ್ಟ್ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್.ಡಿ.ಕೋಟೆ , ಪ್ರಾಥಮಿಕ ಆರೋಗ್ಯ ಕೇಂದ್ರ ಮುಳ್ಳೂರು ಗ್ರಾಮ ಪಂಚಾಯಿತಿ ಮುಳ್ಳೂರು, ಮುಳ್ಳೂರು ಗುರುಪ್ರಸಾದ್ ಜಿ.ಪಿ. ಗ್ರೂಪ್ಸ್ ಬಿಲ್ಡರ್ ಅಂಡ್ ಡೆವಲಪರ್ಸ್ ಮೈಸೂರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಇವರ ಸಹಯೋಗದೊಂದಿಗೆ ಮುಳ್ಳೂರು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್.ಟಿ. ಅಧ್ಯಕ್ಷತೆ ವಹಿಸಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮುಳ್ಳೂರು ಆಸ್ಪತ್ರೆ ಕೋಟೆ ಮತ್ತು ನಂಜನಗೂಡು ತಾಲೂಕಿನ ಮಧ್ಯದಲ್ಲಿದ್ದರೂ ತಾಲೂಕು ಆಸ್ಪತ್ರೆಗಳಿಗೆ ಸಂಪರ್ಕ ಇಲ್ಲದೆ ತುರ್ತು ಸೇವೆಗೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗುವುದು, ಈ ಆಸ್ಪತ್ರೆಗೆ 2 ಬಾರಿ ಉತ್ತಮ ಆಸ್ಪತ್ರೆ ಪ್ರಶಸ್ತಿ ಬಂದಿದೆ, ಸಿಬ್ಬಂದಿಯ ಕೊರತೆ ಇದ್ದು ಮುಂದಿನ ದಿನಗಳಲ್ಲಿ ಎಲ್ಲವು ಸರಿಯಾಗಲಿದೆ ಎಂದರು. ಈ ದಿನ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದು, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಇ.ಸಿ.ಜಿ, ಕಣ್ಣಿನ ಪರೀಕ್ಷೆ, ಶ್ವಾಸಕೋಶ ಪರೀಕ್ಷೆ ಇದ್ದು ಎಲ್ಲರು ಇದರ ಸದುಪಯೋಗ ಪಡಿಸಿಕೊಂಡು ಆರೋಗ್ಯವಂತರಾಗಿರಿ ಎಂದು ತಿಳಿಸಿದರು.

ಆರೋಗ್ಯವೇ ಭಾಗ್ಯ ಈ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಹಾರ್ಟ್ ಸಂಸ್ಥೆಯು 8 ಶಿಬಿರಗಳನ್ನು ನಮ್ಮ ತಾಲೂಕಿನಲ್ಲಿ ನಡೆಸಿದ್ದು ಇದು 9 ನೆಯ ಶಿಬಿರ, ಇಂತಹ ಕುಗ್ರಾಮಗಳಲ್ಲಿ ಶಿಬಿರಗಳು ನಡೆಯಬೇಕು ಈ ಭಾಗದಲ್ಲಿ ತಾಲೂಕಿನ ಆಸ್ಪತ್ರೆಗಳು ಸಂಪರ್ಕ ಇಲ್ಲದೆ ಇರುವುದರಿಂದ ಇಲ್ಲಿಗೆ ತಜ್ಞ ವೈದ್ಯರನ್ನು ಕರೆಯಿಸಿ ತಪಾಸಣೆ ನಡೆಸುತ್ತಿದ್ದು, ಕಾಡಂಚಿನ ಗ್ರಾಮಗಳಿಗೆ ತುರ್ತು ಸಂದರ್ಭದ ಚಿಕಿತ್ಸೆಗಾಗಿ ಅಬುಲೆನ್ಸ್ ನೀಡಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಹಾರ್ಟ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ್, ಕಾಯಿಲೆಗಳನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಲು ಇಂತಹ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುತ್ತಿದ್ದು ಆರೋಗ್ಯವೇ ಭಾಗ್ಯ, ಹಣ ಅಂತಸ್ತು ಏನೇ ಇದ್ದರು ಆರೋಗ್ಯ ಸರಿ ಇಲ್ಲದೆ ಹೋದರೆ ಬದುಕೇ ಶೂನ್ಯ ಈ ನಿಟ್ಟಿನಲ್ಲಿ ಈ ಆರೋಗ್ಯ ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ವೇದಿಕೆಯಲ್ಲಿ ಮುಳ್ಳೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಹೇಂದ್ರ ಸ್ವಾಮಿ, ಬಿಲ್ ಕಲೆಕ್ಟರ್ ನಾಗರಾಜು, ಕಾಂಗ್ರೇಸ್ ಮುಖಂಡ ಪುಟ್ಟಸ್ವಾಮಿ(ವಾಣಿ) ಇನ್ನಿತರರು ಇದ್ದರು.

ಈ ಶಿಬಿರದಲ್ಲಿ 60 ಜನರು ಬಿಪಿ ಮತ್ತು ಶುಗರ್ ಪರೀಕ್ಷೆ, ಸಾಮಾನ್ಯ ರೋಗ ತಪಾಸಣೆ 65 ಜನ, ಕಣ್ಣಿನ ಪರೀಕ್ಷೆ 50, ಇಸಿಜಿ 30 ಮಂದಿ ಮಾಡಿಸಿಕೊಂಡರು, ಶ್ವಾಸಕೋಶ ಪರೀಕ್ಷೆಗೆ 30 ಮಂದಿ ಒಳಪಟ್ಟರು.ಶಿಬಿರದಲ್ಲಿ ಮೈಸೂರು ಎ.ಎಸ್.ಜಿ ಕಣ್ಣಿನ ಆಸ್ಪತ್ರೆಯ ಮಹೇಶ್, ಜಾರ್ಜ್, ಮತ್ತು ತಂಡ, ನಾರಾಯಣ ಹೆಲ್ತ್ ಸುಪ್ರೀತ್ ಮತ್ತು ತಂಡ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಿಬ್ಬಂದಿ ರವಿರಾಜ್, ಶರಣಪ್ಪ, ಆಸೀಮಾ, ರೇಖಾ, ಮುಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ವೀರಭದ್ರ ಶಿವೇಶ, ವಿನಯ ಕುಮಾರ್, ಶಿವಮ್ಮ, ನೀಲಮ್ಮ, ಮಹಾಲಕ್ಷ್ಮಿ, ಸುಬ್ರಮಣ್ಯ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಕಾರ್ಯಕ್ರಮದ ಸುನಂದ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.









