LatestMysore

ಶಿರೇನಹಳ್ಳಿ ಗ್ರಾಮದಲ್ಲಿ ಹುರುವಮ್ಮ ಅದ್ಧೂರಿ ಉತ್ಸವ… ರಾತ್ರಿಯಿಡೀ  ದೇವಿಯ ಮೆರವಣಿಗೆ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಶಿರೇನಹಳ್ಳಿ ಗ್ರಾಮದಲ್ಲಿ ಹುರುವಮ್ಮ ಉತ್ಸವ ಅದ್ದೂರಿಯಾಗಿ ನಡೆಯಿತು. ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

ಶುಕ್ರವಾರ ಮಧ್ಯಾಹ್ನ ಗ್ರಾಮದಿಂದ ಪಕ್ಕದ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಕಾವೇರಿ ನದಿಗೆ ಹುರುವಮ್ಮ ಉತ್ಸವ ಮೂರ್ತಿಯನ್ನು ಕಾವೇರಿ ನದಿಯಲ್ಲಿ ಸ್ವಚ್ಛಗೊಳಿಸಿ ಅದೇ ದಿನ ಗ್ರಾಮಕ್ಕೆ ವಾಪಸ್ ಆಗಿ ರಾತ್ರಿಯಿಡೀ ಮೆರವಣಿಗೆ ನಡೆಯಿತು. ಶನಿವಾರ ಬೆಳಗ್ಗೆ ದೇವಸ್ಥಾನದ ಮುಂದೆ ಹಲವು ಧಾರ್ಮಿಕ ಕಾರ್ಯಕ್ರಮ ನಡೆದು ಮತ್ತೆ ಉತ್ಸವ ಪ್ರಾರಂಭವಾಯಿತು.

ಕಳೆದ 50- 60  ವರ್ಷಗಳ ಹಿಂದೆ ನಡೆಯುತ್ತಿದ್ದ  ಉತ್ಸವ ಹಳೆ ತಲೆಮಾರಿನಲ್ಲಿ ನಡೆದಿತ್ತು ಹಲವು ವರ್ಷಗಳಿಂದ ನಿಂತು ಹೋಗಿದ್ದ ಈ ಉತ್ಸವವನ್ನು ಇಂದಿನ ಯುವ ಸಮೂಹ ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎನ್ನುವ ಹಂಬಲದಿಂದ ಮತ್ತೆ ಉತ್ಸವವನ್ನು ಪ್ರಾರಂಭಿಸಿದ್ದಾರೆ. ಉತ್ಸವ ಆರಂಭದ ನಂತರ  ಶನಿವಾರ  ಭಕ್ತರಿಗೆ ದಾಸೋಹ ನಡೆಯಿತು.

ಸ್ಥಳೀಯರಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡು ಹುರುವಮ್ಮ ದೇವಿಯ ಕೃಪೆಗೆ ಪಾತ್ರರಾದರು.

admin
the authoradmin

Leave a Reply

Translate to any language you want