ಕಾಂತಾರ ಕರಾಮತ್
ತಲೆಬಾಗಿತು ಇಡೀಜಗತ್
ನಿನ್ನೆಮೊನ್ನೆಯ ಪಡ್ಡೆಹುಡುಗ
ರಾತ್ರೋರಾತ್ರಿ ಜಗತ್ಪ್ರಸಿದ್ಧ ಗಿಡುಗ
ಯುವ ಚಿತ್ರೋದ್ಯಮಿ ಕನ್ನಡಿಗ
ಸಿನಿಮಾ ಪ್ರಪಂಚದ ಗಾರುಡಿಗ!
ಆದರೆ….
ಎಷ್ಟುಮಂದಿಗೆ ಗೊತ್ತು ಈತನ
ಸ್ವಂತಿಕೆ ಹಿಂದಿರುವ ಶ್ರಮದಾನ
ಹಗಲು ರಾತ್ರಿ ಶ್ರದ್ಧಾ ಭಕ್ತಿ ಸಿರಿತನ
ಸರಳ ಸಜ್ಜನಿಕೆ ಸಮೂರ್ತ ಹಿರಿತನ
ನಿಷ್ಠೆ ಪ್ರತಿಷ್ಠೆ ಗುರಿಸಾಧನೆ ಸಂಪದ
ಸಂಸ್ಕೃತಿ ಪರಂಪರೆಯ ಪರಮಪದ
ಪರಿಶ್ರಮದ ಅಪರಿಮಿತ ಬದ್ಧತೆ
ಪರಿಪೂರ್ಣ ಪ್ರಾಮಾಣಿಕ ಪಕ್ವತೆ

FLASH BACK…?
ಅಂದು ಆಗ ಇವನ:
ಅಂತರಾಳ ಅರಿಯದಾದ
ಮೂರ್ಖ ಶಿಖಾಮಣಿಗಳೇ
ಅರ್ಹತೆ ಅರ್ಥೈಸಿಕೊಳ್ಳದ
ಸ್ವಾರ್ಥ ಮೂರ್ತಿಗಳೇ
ಯೋಗ್ಯತೆ ಅಳೆಯದಾದ
ಸ್ವಪ್ರತಿಷ್ಠೆ ಅ-ಯೋಗ್ಯರೇ
ಪ್ರಶಾಂತನ(ಶೆಟ್ಟಿ) ಪ್ರತಿಭೆಗೆ ತಕ್ಕ
ಪುರಸ್ಕಾರ ನೀಡದೇಹೋದ
ಮೂಗು ಮುರಿದು ಮೂತಿ ತಿರುವಿದ
ಮಹಾಸುಳ್ಳಿನ ಮುಳ್ಳುಗಳೇ
ಕಾಲಕಸದಂತೆ ಕಸದ ಬುಟ್ಟಿಗೆಸೆದ
ಹೀಗಳೆದು ಜರಿದ ಜಳ್ಳುಪೊಳ್ಳುಗಳೇ
ಡೌಲುಢಂಬಾಚಾರ ತೋರಿದ
ಗತ್ತು ಗಮ್ಮತ್ತಿನ ಕಳ್ಳಮಳ್ಳರೇ….?
ಇಂದು ಈಗ ಇವನನ್ನ:
ಕಸದಿಂದ ರಸತೆಗೆದ
ಹೊನ್ನಗಟ್ಟಿ ರಿಷಭಶೆಟ್ಟಿ ನೀನು
ಸಾಧನೆಯ ಶತಮಾನದ
ಪ್ರತಿಭಾವಂತ ಪುರುಷ ನೀನು
ನವನವೀನ ನವರತ್ನದ
ಅನರ್ಘ್ಯದಾ ಮುತ್ತು ನೀನು
ಎಲ್ಲರಿಗೂ.. ಬೇಕಾದ
ಎಲ್ಲರೊಳ್ ಒಂದಾದ ಜಾಣ ನೀನು
ಹೀಗೆ…ಇಂದ್ರಚಂದ್ರ ಎಂದೆಲ್ಲ ನಿನ್ನನ್ನು
ಹೊ(ಬೊ)ಗಳುತ್ತ ಹೊನ್ನಶೂಲಕ್ಕೇರಿಸುವ
ಹೊಗಳುಭಟ್ಟರಾದ ಗೋಸುಂಬೆಗಳಾದ
ಆ…ಅವರುಗಳೇ, ಈ…ಇವರುಗಳು?
ಸರಿ-ತಪ್ಪು, ರಕ್ಷೆ-ಶಿಕ್ಷೆ, ಇತ್ಯಾದಿಯನ್ನು
ಕಾಲವೆ ನಿರ್ಣಯಿಸುತ್ತೆ, ಕಾದು ನೋಡೋಣ!

FLASH FRONT LOOK……..?
38 ವರ್ಷಗಳಿಂದ ಪ್ರಕಟಿಸದ
ಫ್ರಂಟ್ ಲೈನ್
ಮ್ಯಾಗಝೀನ್ ಮುಖಪುಟ ಲೇಖನ
92 ವರ್ಷಗಳಿಂದ ಸಾಧಿಸದ
ಸ್ಯಾಂಡಲ್ ವುಡ್
ಸರ್ವತೋಮುಖ ಸುಗಂಧ ಲೇಪನ
103 ವರ್ಷಗಳಿಂದ ಆಗಿರದ
ಇಂಡಿಯನ್ ಫಿಲ್ಮ್ ವರ್ಲ್ಡ್
ಸರ್ವ ಶ್ರೇಷ್ಠ ಜೇಷ್ಠ ಮಾಪನ
128 ವರ್ಷಗಳಿಂದ ಆಗಿರದ
ಸಿನಿಪ್ರಪಂಚ ಹಾಲಿವುಡ್
ಸಾರ್ವಕಾಲಿಕ ಹೊಸ ಚೇತನ
ಮುಂತಾದ ಅನೇಕ ದಾಖಲೆ
ಕಂಡು ಕೇಳಿ
ಬೆರಗಾಗಿ ಬೆಪ್ಪರಾಗಿ ತೆಪ್ಪಗಾದರು…?

The FLASH FUTURE ……?
ಭವಿಷ್ಯತ್ಕಾಲದಲ್ಲಿ ಮುಂದೊಂದಿನ
ಸಾಧಾರಣ ಶೆಟ್ಟರ
ಅ-ಸಾಧಾರಣ ಕಾಂತಾರ
ಪ್ರಪಂಚದಾದ್ಯಂತ ಎಲ್ಲದರಲ್ಲು
ನಂಬರ್ 1, ಆಸ್ಕರನ್ನೂ ಗೆಲ್ಲು
ಅಂಥ ಇಂಥ..ಜನರಿಂದ
ಯಾವುದೇ ಕಾಲ್ತುಳಿತಕ್ಕೆ
ಕಾಲೆಳೆಯುವವರ ಸೆಳೆತಕ್ಕೆ
ಸಿಲುಕದಂತೆ ಕಾಪಾಡು ದೊರೆ
ಓ…ಕಾಂತಾರ ದೇವರೇ…?!










ಅನಂತಾನಂತ ಧನ್ಯವಾದ ಸರ್
ಅನಂತಾನಂತ ಧನ್ಯವಾದ ಲವ ಸರ್
ನನಗಂತೂ ಬಹಳ ಇಇಷ್ಟವಾಯಿತು ಈ ವಿಶೇಷ ಲೇಖನ, ಧನ್ಯವಾದ ಸರ್
Excellent. LINES about WORLD class Kannada movie, which made the entire film industry…… stunning and magical thunderstorms
ನನಗೆ ಮಾತ್ರವಲ್ಲ ನನ್ನ ಕುಟುಂಬದವರಿಗೆ ನನ್ನ ಉದ್ಯಾನವನ ಮಿತ್ರರಿಗೆ ಹಾಗೂ ನನ್ನ ಬಂಧುಬಳಗಕ್ಕೂ ಬಹಳ ಇಷ್ಟವಾಯ್ತು ಈ ಕಥನ ಕವನ ಲೇಖನ, ಪತ್ರಿಕಾ ಬಳಗಕ್ಕೆ ಮತ್ತು ಬರೆದ ಕವಿಯವರಿಗೆ ಸಹಸ್ರ ಸಹಸ್ರ ಅಭಿನಂದನೆಗಳು
The best way of writing the truth about historical movie
ಸಾಮಾನ್ಯವಾಗಿ ನಾನು ಯಾವಾಗಲೂ ಯಾರನ್ನೂ ಹೊಗಳುವುದಿಲ್ಲ ಮತ್ತು ಯಾವುದನ್ನೂ ಮೆಚ್ಚುವುದಿಲ್ಲ , ಆದರೆ ಕಾಂತಾರ ಬಗೆಗಿನ ಈ ಕಥನಕವನ ನನ್ನ ತನುಮನ ಗೆದ್ದಿತು, ಧನ್ಯವಾದ ಸ್ವಾಮಿ, ಜನಮನ ಕನ್ನಡ ಸಂಪಾದಕರಿಗೆ. ದಿಟವಾಗಿಯೂ ಕುಮಾರಕವಿ ಶ್ಲಾಘನೀಯರು.
ಅಕ್ಷರಸಾಮ್ರಾಟ ಕುಮಾರಕವಿ ನಟರಾಜ ಅವರಿಗೆ ನಮಸ್ಕಾರ, ನಿಮ್ಮಂಥ ಪ್ರತಿಭಾವಂತ ಲೇಖಕರನ್ನು ಪಡೆದ ಕನ್ನಡತಾಯಿ ಮಡಿಲು ಸದಾ ಸುರಭಿಯಾಗಿ ಇರುತ್ತದೆ ಎಂಬುದರಲ್ಲಿ ಸಂಶಯವಿಲ್ಲ, ಅಭಿನಂದನೆ, ಧನ್ಯವಾದಗಳು
ಗಮಕ ಕಲಾವಿದ ರಾಮಕೃಷ್ಣ
ಬಹಳ ದಿನಗಳ ನಂತರದ ಒಂದು ಉತ್ತಮ ಕವನ ಸತ್ಯ ಕಥೆಯ ಸತ್ವಪೂರ್ಣ ಬರಹ ಓದುವ ಮೂಲಕ ತುಂಬಾ ಸಂತಸವಾಯ್ತು
ಕನ್ನಡ ನಾಡಿನ ಕೃತಿ kv ಪುಟ್ಟಪ್ಪ (kuvempu) ಆಕೃತಿ ಅಣ್ಣಾವ್ರು, ಸಂಸ್ಕೃತಿ ಅಪ್ಪು ಹಾಗೂ ಸಾಹಿತ್ಯರತ್ನ ಕುಮಾರಕವಿ ನಟರಾಜ್ ನನ್ನ ಗುರುಗಳು, ನಾನು ಅವರ ಏಕಲವ್ಯ. ನಿಮ್ಮ ಪತ್ರಿಕೆಯಲ್ಲಿ ಕವಿಗಳು ಬರೆಯುವ ಎಲ್ಲಾ ಲೇಖನ ಕವನ ಓದುವ ಅಭಿಮಾನಿ ನಾನು. ಕಾಂತಾರ ಸಿನಿಮಾದ ಬಗ್ಗೆ ಹಾಗೂ ನಟ RN ಸುದರ್ಶನ್ ರವರ ಬಗ್ಗೆ ಬರೆದ ಲೇಖನ ಕವನ ಸೂಪರ್……
ಕಾಂತಾರ ಪ್ರಪಂಚದಾದ್ಯಂತ ಪ್ರದರ್ಶನ ಕಂಡು ಭರ್ಜರಿ ಹೆಸರು ಹಣ ಕೀರ್ತಿ ಗಳಿಸುತ್ತಿದೆ, ಜೈ ಕನ್ನಡಿಗ ಜೈ ಕರ್ನಾಟಕ ಜೈ ಸ್ಯಾಂಡಲ್ವುಡ್ ಚಿತ್ರರಂಗ.
ಈ ಶತಮಾನದ ಪ್ರತಿಭಾವಂತ ನಟ-ನಿರ್ದೇಶಕನ ಅತ್ತ್ಯುತ್ತಮ ಕನ್ನಡ ಸಿನಿಮಾದ ಬಗ್ಗೆ ಒಂದು ಭವ್ಯ ಕವನ ಲೇಖನ.
ನಾನು ಸಿನಿಮ ನೋಡುವುದು ಬಹಳ ಅಪರೂಪ. ಆದರೆ ಕಾಂತಾರ ನನಗೆ ತುಂಬ ಇಷ್ಟವಾದ ಕನ್ನಡ ಚಿತ್ರ. ಇದರ ಬಗ್ಗೆ ಬರೆದ ಈ ಕವನ ಬಹಳ ಚೆನ್ನಾಗಿದೆ
Very good poetic article 👏 👌
Very much dashing poetic article 👏 👌
Very nice poetically written by kumarakavi Natraj sir 👏 👍
Very much dashing poetic article 👏 👌
Very much appreciated 🙏 👍 poetic article narrated wonderfully by KUMARA KAVI Natraj sir 👏
Very much appreciated 🙏 👍 poetic article narrated wonderfully by KUMARA KAVI Natraj sir 👏
Hi Sir, wonderful poetic article really nice writing!
ಹಿರಿಯ ನಟ ಸುದರ್ಶನ್ ಬಗ್ಗೆ ಬರೆದ ಲೇಖನ ಮತ್ತು ಕಿರಿಯ ಕಲಾವಿದ ರಿಷಭ್ ಶೆಟ್ಟರ ಬಗ್ಗೆ ರಚಿಸಿರುವ ಕವನ ಎರಡೂ ಸಹ ಅಮೋಘವಾಗಿದೆ. ಲೇಖಕರಿಗೆ ಮತ್ತು ಪ್ರಕಾಶಕರಿಗೆ ಇಬ್ಬರಿಗೂ ಅನಂತಾನಂತ ಧನ್ಯವಾದ, ನಮಸ್ಕಾರ
ಶಿವಕುಮಾರ್,
ಬೆಳ್ಳಿತೆರೆಯ ನಟ ಹಾಗೂ ಕಿರುತೆರೆ ಕಲಾವಿದ,
ಬೆಂಗಳೂರು ನಾಗರಬಾವಿ
ಹಿರಿಯ ನಟ ಸುದರ್ಶನ್ ಬಗ್ಗೆ ಬರೆದ ಲೇಖನ ಮತ್ತು ಕಿರಿಯ ಕಲಾವಿದ ರಿಷಭ್ ಶೆಟ್ಟರ ಬಗ್ಗೆ ರಚಿಸಿರುವ ಕವನ ಎರಡೂ ಸಹ ಅಮೋಘವಾಗಿದೆ. ಲೇಖಕರಿಗೆ ಮತ್ತು ಪ್ರಕಾಶಕರಿಗೆ ಇಬ್ಬರಿಗೂ ಅನಂತಾನಂತ ಧನ್ಯವಾದ, ನಮಸ್ಕಾರ
ಶಿವಕುಮಾರ್,
ಬೆಳ್ಳಿತೆರೆಯ ನಟ ಹಾಗೂ ಕಿರುತೆರೆ ಕಲಾವಿದ, ನಾಗರಬಾವಿ
ಬೆಂಗಳೂರು
ಹಿರಿಯ ನಟ ಸುದರ್ಶನ್ ಬಗ್ಗೆ ಬರೆದ ಲೇಖನ ಮತ್ತು ಕಿರಿಯ ಕಲಾವಿದ ರಿಷಭ್ ಶೆಟ್ಟರ ಬಗ್ಗೆ ರಚಿಸಿರುವ ಕವನ ಎರಡೂ ಸಹ ಅಮೋಘವಾಗಿದೆ. ಲೇಖಕರಿಗೆ ಮತ್ತು ಪ್ರಕಾಶಕರಿಗೆ ಇಬ್ಬರಿಗೂ ಅನಂತಾನಂತ ಧನ್ಯವಾದ, ನಮಸ್ಕಾರ
ಶಿವಕುಮಾರ್,
ಬೆಳ್ಳಿತೆರೆಯ ನಟ ಹಾಗೂ ಕಿರುತೆರೆ ಕಲಾವಿದ, ನಾಗರಬಾವಿ
ಬೆಂಗಳೂರು