ನರಸಿಂಹರಾಜು ನಟನೆಯ ಸಿನಿಮಾದಲ್ಲಿ ನಗುವಿಗೆ ಬರವಿಲ್ಲ…. ಅವರ ನಟನೆಯ ಸಿನಿಮಾದಲ್ಲಿ ನೀವು ನೋಡಿದೆಷ್ಟು?

ಜನಮನಕನ್ನಡ ಇದೀಗ ಕನ್ನಡದ ಚಂದನವನದಲ್ಲಿ ಅರಳಿ ಮರೆಯಾದ ನಟರನ್ನು ನೆನಪು ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ ಅವರು ಚಂದನವನದ ಸುಮಗಳನ್ನು ಪರಿಚಯಿಸುವ ಪ್ರಯತ್ನವನ್ನು ಮಾಡಿದ್ದಾರೆ. ಈ ಬಾರಿ ಕನ್ನಡದ ಹಾಸ್ಯಚಕ್ರವರ್ತಿ ಎಂದೇ ಕರೆಯಲ್ಪಡುವ ಟಿ.ಆರ್.ನರಸಿಂಹರಾಜು ಅವರ ಬಗ್ಗೆ ಒಂದಿಷ್ಟು ವಿಚಾರವನ್ನು ಬರೆದಿದ್ದಾರೆ. ಹಾಗೆಯೇ ಅವರು ನಟಿಸಿದ ಸಿನಿಮಾಗಳನ್ನು ಪರಿಚಯಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹಲವಾರು ನಟರು ತಮ್ಮ ನಟನೆಯ ಮೂಲಕ ಮನೆಮಾತಾಗಿದ್ದಾರೆ. ಇವತ್ತು ಹಲವು ನಟರು ನಮ್ಮೊಂದಿಗಿಲ್ಲ. ಆದರೆ ಅವರು ನಟಿಸಿದ ಸಿನಿಮಾಗಳು ಅವರ ನೆನಪುಗಳನ್ನು ಅಚ್ಚಳಿಯದಂತೆ ಉಳಿಸಿದೆ. ಹಳೆಯ ಸಿನಿಮಾ ನೋಡುವಾಗಲೆಲ್ಲ ಅವರು ಎಲ್ಲೂ ಹೋಗಿಲ್ಲ ನಮ್ಮೊಂದಿಗಿದ್ದಾರೆನೋ ಎಂಬ ಭಾವ ಕಾಡದಿರದು…
ಇವತ್ತು ಸಿನಿಮಾರಂಗ ಹಲವಾರು ಬದಲಾವಣೆಗಳನ್ನು ಕಂಡಿದೆ. ಅದೆಷ್ಟೋ ಸಿನಿಮಾಗಳು ತೆರೆಕಾಣುತ್ತವೆ. ಕೆಲವೇ ಕೆಲವು ಮಾತ್ರ ಹಿಟ್ ಆಗುತ್ತವೆ. ಆದರೆ ಅದೆಷ್ಟೋ ಸಿನಿಮಾಗಳಾಗಲೀ, ಅದರ ನಟರಾಗಲೀ ಪ್ರೇಕ್ಷಕರ ಮನದಲ್ಲಿ ಉಳಿಯುವುದೇ ಇಲ್ಲ. ಇಂತಹ ಕಾಲಘಟ್ಟದಲ್ಲಿ ಹಳೆಯ ಚಿತ್ರರಂಗದ ನಟರು ಇನ್ನೂ ನಮ್ಮನ್ನು ಕಾಡುತ್ತಿದ್ದಾರೆ ಎಂದರೆ ಅದಕ್ಕೆ ಅವರ ನಟನೆಯೇ ಸಾಕ್ಷಿ. ಹೀಗಾಗಿ ಇಂತಹ ನಟರನ್ನು ನಾವು ನೆನಪಿಸಿಕೊಳ್ಳುವುದು ಮತ್ತು ಅವರು ನಟಿಸಿದ ಸಿನಿಮಾಗಳನ್ನು ಮೆಲುಕು ಹಾಕುವುದು ಬಹುಮುಖ್ಯವಾಗುತ್ತದೆ.
ಹಾಗೆನೋಡಿದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೆ ನಾಯಕನಟನಷ್ಟೆ ಜನಪ್ರಿಯತೆ, ಹಣ ಹಾಗೂ ಮಾನ್ಯತೆ ಪಡೆದವರು ಎಂದರೆ ಅದು ನರಸಿಂಹರಾಜು. ಸುಮಾರು ಎರಡು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಯಾರೇ ಹೀರೊ ಆಗಿದ್ದರೂ ಕಾಮಿಡಿಯನ್ ಪಾತ್ರಕ್ಕೆ ಇವರು ಗ್ಯಾರೆಂಟಿ. ಇವರಿಗೋಸ್ಕರವೆ ಫಿಲಂ ನೋಡುತ್ತಿದ್ದ ಪ್ರೇಕ್ಷಕರ ಬಳಗವೆ ಇತ್ತು. ಮಕ್ಕಳು-ಯುವಕರು-ಮುದುಕರು ಇವರ ನಟನೆಗಾಗಿ ಮಾರುಹೋಗಿದ್ದರು.
ಒಂದುಕಾಲಕ್ಕೆ ರಾಜ್- ನರಸಿಂಹರಾಜು ಜೋಡಿಯ ಚಿತ್ರದ ಯಶಸ್ಸು ಕಟ್ಟಿಟ್ಟಬುತ್ತಿ. ಮಿನುಗುತಾರೆ ಕಲ್ಪನಾರನ್ನು ಕನ್ನಡಚಿತ್ರರಂಗಕ್ಕೆ (ಬಿ.ಆರ್.ಪಂತುಲುಗೆ) ಪರಿಚಯ ಮಾಡಿಸಿದ್ದು ಇವರೇ ಎಂಬುದು ಇತಿಹಾಸ. ಜಯಂತಿ ಜತೆ ನಟಿಸಿದ’ನಕ್ಕರೆ ಅದೇ ಸ್ವರ್ಗ ’ಚಿತ್ರದ’ ಬಾಳೊಂದು ಭಾವಗೀತೆ ಮುಂತಾದ ಹಾಡುಗಳು ಇಂದಿಗೂ ಜನಪ್ರಿಯ ಚಿತ್ರಗೀತೆಗಳು. ಹೀರೋ ಆಗಿ ನಟಿಸಿದ್ದು ಕೆಲವೇ ಚಿತ್ರಗಳಾದರೂ ಪ್ರೊಫ಼ೆಸರ್ ಹುಚ್ಚೂರಾಯ ಯಶಸ್ವಿ ಚಿತ್ರವೆನಿಸಿ ಪ್ರಶಸ್ತಿಯನ್ನೂ ಪಡೆಯಿತು. ಪತ್ನಿ ಶಾರದಮ್ಮ, ಮೂರು ಮಕ್ಕಳು. ಅವರ ಪುತ್ರ ನರಹರಿ, ಪುತ್ರಿಯರು ಧರ್ಮಾವತಿ ಮತ್ತು ಸುಧಾ.
ಇವತ್ತು ಸುಧಾ ನರಸಿಂಹರಾಜು ಎಲ್ಲರಿಗೂ ಪರಿಚಿತರೇ ಅನೇಕ ಸಿನಿಮಾಗಳಲ್ಲಿ ನಟಿಸಿ ಇತ್ತೀಚೆಗೆ ಗಟ್ಟಿಮೇಳ ಧಾರಾವಾಹಿ ಸೇರಿದಂತೆ ಹಲವಾರು ಸೀರಿಯಲ್ಗಳಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡ ಸಿನಿಮಾ ಲೋಕದ ಗ್ರೇಟ್ ಕಾಮಿಡಿಯನ್, ಏಕೈಕ ಹಾಸ್ಯಚಕ್ರವರ್ತಿ, ರಾಜ್ ಮತ್ತು ಮಿಕ್ಕೆಲ್ಲಾ ಹೀರೋಗಳಷ್ಟೆ ಜನಪ್ರಿಯತೆ, ಪ್ರತಿಭೆ, ಘನತೆ,ಗೌರವ ಇದ್ದಂಥ ಇನ್ನೂರಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದು ಇತಿಹಾಸ. ಅಂತಹ ಹಾಸ್ಯಚಕ್ರವರ್ತಿ ನರಸಿಂಹರಾಜು 23-07-1923 ರಲ್ಲಿ ಜನಿಸಿ 11.07.1979ರಂದು 55ನೇ ವಯಸ್ಸಲ್ಲಿ ನಿಧನರಾದರೆಂಬುದೇ ಬೇಸರದ ಸಂಗತಿ.
ಅವರು ಇನ್ನಷ್ಟು ವರ್ಷಗಳ ಕಾಲ ಇದ್ದಿದ್ದರೆ ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಸಿನಿಮಾಗಳನ್ನು ನೀಡುತ್ತಿದ್ದರೇನೋ ಆದರೆ ಅವರು ಈಗ ಇಲ್ಲ. ಅವರ ನಟನೆಯ ಸಿನಿಮಾಗಳು ಟಿವಿಗಳಲ್ಲಿ ಬರುವಾಗ ಅದನ್ನು ನೋಡುವ ಜನ ಇನ್ನಷ್ಟು ವರ್ಷ ಇರಬೇಕಿತ್ತು ಎಂದುಕೊಳ್ಳುತ್ತಾರೆ. ಒಬ್ಬ ಕಲಾವಿದನಿಗೆ ಇದೊಂದು ಗೌರವವೇ.. ಕಲಾವಿದರಿಗೆ ಸಾವಿಲ್ಲ ಎನ್ನುವುದಂತು ನಿಜ… ಅದು ಏನೇ ಇರಲಿ ಅವರ ನಟನೆಯ ಸಿನಿಮಾಗಳು ಇಲ್ಲಿವೆ. ಇವುಗಳಲ್ಲಿ ನೀವು ನೋಡಿದೆಷ್ಟು? ನೋಡಿ ಬಿಡಿ…
ಬೇಡರಕಣ್ಣಪ್ಪ, ಸತ್ಯಹರಿಶ್ಚಂದ್ರ, ಲಕ್ಷ್ಮೀಸರಸ್ವತಿ, ಸೋದರಿ, ಪಾತಾಳಮೋಹಿನಿ, ಚೂರಿಚಿಕ್ಕಣ್ಣ, ಶಿವಭಕ್ತಮಾರ್ಕಂಡೇಯ, ಬಾಲರಾಜನಕಥೆ, ಶ್ರೀಕೃಷ್ಣದೇವರಾಯ, ಹರಿಭಕ್ತ, ಲವ್ ಇನ್ ಬೆಂಗಳೂರ್, ಕಸ್ತೂರಿನಿವಾಸ, ರೇಣುಕಾಮಹಾತ್ಮೆ, ಶ್ರೀಕನ್ಯಕಾಪರಮೇಶ್ವರಿ ಕಥೆ, ಪ್ರತಿಧ್ವನಿ, ಭಕ್ತಪ್ರಹ್ಲಾದ, ತೂಗುದೀಪ, ಕುಲಗೌರವ, ಪ್ರಭುಲಿಂಗಲೀಲೆ, ಮನಸ್ಸಿದ್ದರೆಮಾರ್ಗ, ಕಾಸಿದ್ರೆಕೈಲಾಸ, ನಳದಮಯಂತಿ, ಭಕ್ತಕನಕದಾಸ, ಅನುಗ್ರಹ, ಜಗಜ್ಯೋತಿಬಸವೇಶ್ವರ, ರಾಜಶೇಖರ, ಮಾಲತಿಮಾಧವ,. ಧರ್ಮವಿಜಯ, ಬಂಗಾರದ ಹೂವು, ಜಾತಕರತ್ನಗುಂಡಾಜೋಯಿಸ, ಅಬ್ಬಾ ಆ ಹುಡುಗಿ, ರಾಜದುರ್ಗದರಹಸ್ಯ, ಶರಪಂಜರ, ರಾಣಿಹೊನ್ನಮ್ಮ.
ದೇವರಗೆದ್ದ ಮಾನವ, ನಮ್ಮಬದುಕು, ದಶಾವತಾರ, ಇಮ್ಮಡಿಪುಲಿಕೇಶಿ, ಯಾವಜನ್ಮದಮೈತ್ರಿ, ಮಕ್ಕಳರಾಜ್ಯ, ಮುರಿಯದಮನೆ, ನಾರಿ ಮುನಿದರೆ ಮಾರಿ, ರಣಧೀರ ಕಂಠೀರವ, ಎಮ್ಮೆತಮ್ಮಣ್ಣ, ಗಂಧದಗುಡಿ, ಕೈವಾರಮಹಾತ್ಮೆ, ಗಂಗೆಗೌರಿ. ದೇವರು ಕೊಟ್ಟ ತಂಗಿ, ನಾಗಾರ್ಜುನ, ಲಗ್ನಪತ್ರಿಕೆ, ಜಗಮೆಚ್ಚಿದಮಗ, ಕಿತ್ತೂರುಚೆನ್ನಮ್ಮ, ನಕ್ಕರೆಅದೇಸ್ವರ್ಗ [ಹೀರೊ], ಲಕ್ಷಾಧೀಶ್ವರ, ವಿಜಯನಗರದ ವೀರ ಪುತ್ರ, ಬ್ಲಾಕ್ ಮಾರ್ಕೆಟ್, ಚಿಕ್ಕಮ್ಮ, ಭೂದಾನ, ಪ್ರೇಮಕ್ಕೂ ಪರ್ಮಿಟ್ಟೇ, ಸಾಕ್ಷಾತ್ಕಾರ, ರತ್ನಮಂಜರಿ, ಪದವೀಧರ, ಪ್ರೊಫ಼ೆಸರ್ ಹುಚ್ಚೂರಾಯ[ಹೀರೊ], ಸ್ವರ್ಣಗೌರಿ, ಮನಸ್ಸಾಕ್ಷಿ, ಮುದ್ದುಮೀನ, ವಿಧಿವಿಲಾಸ, ಸಿಂಹಸ್ವಪ್ನ, ಸೇಡಿಗೆಸೇಡು, ಗಾಳಿಗೋಪುರ, ಜೇಡರಬಲೆ, ರಂಗಮಹಲ್ ರಹಸ್ಯ.
ಸತಿಶಕ್ತಿ, ನಮ್ಮಊರು, ಠಕ್ಕಬಿಟ್ರೆಸಿಕ್ಕ, ನಂದಾದೀಪ, ಗೋವಾದಲ್ಲಿ ಸಿಐಡಿ 999, ದುಡ್ಡೇದೊಡ್ಡಪ್ಪ, ಸಾಕುಮಗಳು, ಗಾಂಧಿನಗರ, ಚಿನ್ನಾರಿಪುಟ್ಟಣ್ಣ, ಜೀವನತರಂಗ, ಬೆಂಗಳೂರುಮೈಲ್, ಬೆಟ್ಟದಭೈರವ, ಜೇನುಗೂಡು, ಬೀದಿಬಸವಣ್ಣ, ಒಂದೇರೂಪ ಎರಡುಗುಣ, ವಾಲ್ಮೀಕಿ, ಭಲೇಬಸವ, ಆಶೀರ್ವಾದ, ಮಲ್ಲಿಮದುವೆ, ಅಮ್ಮ, ಅಪರಾಧಿ, ವೀರಕೇಸರಿ, ರೌಡಿರಂಗಣ್ಣ, ಲಕ್ಷ್ಮಿನಿವಾಸ, ಚಂದ್ರ ಕುಮಾರ, ಗಂಡೊಂದು ಹೆಣ್ಣಾರು, ಕಿಟ್ಟುಪುಟ್ಟು, ಅಮರಶಿಲ್ಪಿ ಜಕಣಾಚಾರಿ. ಆಪರೇಷನ್ ಜ್ಯಾಕ್ಪಾಟ್, ಎಲ್ಲಾ ಹಣಕ್ಕಾಗಿ, ಚಿನ್ನದಗೊಂಬೆ, ಕಾಡಿನರಹಸ್ಯ, ಮಾತು ತಪ್ಪದ ಮಗ.
ಪ್ರತಿಜ್ಞೆ, ಎರಡುಮುಖ, ವಸಂತಲಕ್ಷ್ಮಿ, ಶಿವರಾತ್ರಿಮಹಾತ್ಮೆ, ಮೊದಲರಾತ್ರಿ, ಕಿಲಾಡಿಕಿಟ್ಟು, ನವಜೀವನ, ಹಸಿರುತೋರಣ, ನಮ್ಮೂರು, ಚಂದ್ರಹಾಸ, ನಾಡಿನಭಾಗ್ಯ, ಸ್ನೇಹಸೇಡು, ವಾತ್ಸಲ್ಯ, ಭೂಪತಿರಂಗ, ಪ್ರೀತಿ ಮಾಡು ತಮಾಷೆ ನೋಡು, ನನ್ನಕರ್ತವ್ಯ, ಬಾಲನಾಗಮ್ಮ, ಅಸಾಧ್ಯಅಳಿಯ, ಮಿಸ್ಲೀಲಾವತಿ, ಮಹಾಸತಿ ಅನಸೂಯ, ಮಂಜಿನತೆರೆ.
–ಕುಮಾರಕವಿ ಬಿ.ಎನ್.ನಟರಾಜು
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ
Very informative article namaste namaste 🙏 👏
ಮತ್ತೆ ಮತ್ತೆ ಓದಬೇಕು ಎಂದು ಎನಿಸುವ ಮತ್ತು ನಗೆಯ ಕಡಲಲ್ಲಿ theylisuvavanta ಹಳೇ ಕಾಲದ ಆದರೆ interesting ಲೇಖನ ಧನ್ಯವಾದಗಳು ಸಾರ್