LatestMysore

ಅರ್ಜುನಹಳ್ಳಿರಾಜಯ್ಯ ನಿಧನಕ್ಕೆ ದಲಿತ ಸಂಘಟನೆಗಳ ಒಕ್ಕೂಟದಿಂದ ಸಂತಾಪ ಸಲ್ಲಿಕೆ

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಸಮಾಜದ ಮುಖಂಡರಾಗಿ, ರಾಜಕೀಯ ಜನಪ್ರತಿನಿಧಿಯಾಗಿ, ದಲಿತ ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡಿ ಸಮುದಾಯವನ್ನೇ ತನ್ನ ಕುಟುಂಬ ಎಂದುಕೊಂಡಿದ್ದ ಜಿ.ಪಂ.ಮಾಜಿ ಸದಸ್ಯ ದಲಿತಮುಖಂಡ ಅರ್ಜುನಹಳ್ಳಿರಾಜಯ್ಯನವರ ಅಗಲಿಕೆ ಇಡೀ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಜಿ.ಪಂ.ಮಾಜಿ ಸದಸ್ಯ ಅಚ್ಚುತಾನಂದ ಸಂತಾಪ ವ್ಯಕ್ತಪಡಿಸಿದರು.

ಪಟ್ಟಣದ ಸರಕಾರಿನೌಕರರ ಭವನದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು. ಅರ್ಜುನಹಳ್ಳಿರಾಜಯ್ಯ ಜಿಲ್ಲೆಯಲ್ಲಿ ಒಬ್ಬ ಪ್ರಭಾವಿ ದಲಿತ ಮುಖಂಡರಾಗಿ, ಜಿ.ಪಂ.ಸದಸ್ಯರಾಗಿ ಸಮಾಜ ಮತ್ತು ದಮನಿತರ ಪರವಾಗಿ ಹೋರಾಟ ಮಾಡುವ ಮೂಲಕ ಜನಾನುರಾಗಿಯಾಗಿದ್ದರು ಎಂದರು.

ದಲಿತಮುಖಂಡರಾಗಿ ಯಾವುದೇ ಸಮಾಜದ ವ್ಯಕ್ತಿಗೆ ಸಮಸ್ಯೆಯಾಗಿ ನೋವುಂಟಾದಾಗ ಅವರ ಪರ ನ್ಯಾಯಯುತವಾಗಿ ಹೋರಾಟ ಮಾಡಿ ಆ ಕುಟುಂಬಕ್ಕೆ ನ್ಯಾಯ ಒದಗಿಸುತ್ತಿದ್ದು ರಾಜಯ್ಯನವರು ತಾಲೂಕಿನ ಎಲ್ಲಾ ವರ್ಗದ ಜನರ ವಿಶ್ವಾಸ ಗಳಿಸಿದ್ದರು ಎಂದ ಅವರು ಇಂತಹ ಒಬ್ಬ ಜನನಾಯಕನನ್ನು ಸಮಾಜ ಕಳೆದುಕೊಂಡಿರುವುದು ಸಮಾಜಕ್ಕಲ್ಲದೆ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದರು.

ಸಭೆಯಲ್ಲಿ ದಲಿತ ಮುಖಂಡ ಹನಸೋಗೆನಾಗರಾಜ್, ತಾ.ಪಂ.ಮಾಜಿ ಸದಸ್ಯ ಹಂಗರಬಾಯನಹಳ್ಳಿತಮ್ಮಣ್ಣ, ಗೀತಾಮಹೇಶ್, ರಾಮಚಂದ್ರ, ದೊಡ್ಡಯ್ಯ, ಮುತ್ತುರಾಜ್, ರಾಚಯ್ಯ, ಶೇಖರ್, ಚಲುವರಾಜ್, ಸುರೇಶ್, ಸಂಪತ್, ವೆಂಕಟೇಶ್, ಮಂಜುನಾಥ್, ಗೋಪಿ, ಮೋಹನ್, ಪುಟ್ಟಣ್ಣಯ್ಯ, ಕೃಷ್ಣ, ಬಿ.ಟಿ.ಗೋವಿಂದರಾಜು, ಮಹದೇವಸ್ವಾಮಿ ಸೇರಿದಂತೆ ಇನ್ನಿತರ ಮುಖಂಡರು ಹಾಗೂ ಸಮಾಜದ ಬಾಂಧವರು ಪಾಲ್ಗೊಂಡು ಕಂಬನಿ ಮಿಡಿದರು.

admin
the authoradmin

Leave a Reply

Translate to any language you want