CinemaLatest

ಕನ್ನಡ ಚಿತ್ರರಂಗದ ಚೊಚ್ಚಲ ಹೀರೊ ಎಂ.ವಿ.ಸುಬ್ಬಯ್ಯನಾಯ್ಡು ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಅವರ ಬಣ್ಣದ ಬದುಕಿನ ಕಥೆ….

ಕನ್ನಡ ಚಿತ್ರರಂಗವು ಹಲವು ಪ್ರತಿಭಾವಂತರನ್ನು ಪರಿಚಯಿಸಿದೆ.. ಅಷ್ಟೇ ಅಲ್ಲದೆ ಆ ಸಾಧಕರು ನೀಡಿದ ಕೊಡುಗೆಗಳು ಚಿತ್ರರಂಗ ಇರುವಷ್ಟು ದಿನ ನೆನಪಾಗಿ ಉಳಿಯಲಿದೆ. ಆಧುನಿಕ ಯುಗದಲ್ಲಿ ಸಿನಿಮಾ ನಿರ್ಮಾಣ  ಮಾಡುವುದು ಕಷ್ಟವೇನಲ್ಲ. ಆದರೆ ಸಮರ್ಪಕ ತಂತ್ರಜ್ಞಾನವಿಲ್ಲದ ಕಾಲದಲ್ಲಿಯೇ ಪ್ರೇಕ್ಷಕರನ್ನು ರಂಜಿಸಿ ಅವರ ಮನದಲ್ಲಿ ಉಳಿದು ಹೋದ ನಟರು ಬಹಳಷ್ಟಿದ್ದಾರೆ. ಅವರೆಲ್ಲರನ್ನು ನೆನಪು ಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಕಳೆದ 55 ವರ್ಷಗಳಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡು ಚಂದನವನದ ಬಗೆಗಿನ ಮಾಹಿತಿಯನ್ನು ಓದುಗರ ಮುಂದಿಡುತ್ತಿರುವ ಕುಮಾರಕವಿ ನಟರಾಜ್ ಅವರ ಉತ್ಸಾಹವನ್ನು ಮೆಚ್ಚಲೇ ಬೇಕಾಗುತ್ತದೆ. ಕನ್ನಡ ಚಿತ್ರರಂಗದ ಬಗ್ಗೆ ಸಮಗ್ರವಾಗಿ ಅರಿತುಕೊಂಡಿರುವ ಅವರು ಮಾಹಿತಿಗಳನ್ನು ನೀಡುತ್ತಲೇ ಹೋಗುತ್ತಿದ್ದಾರೆ.. ಅವರಿಗೆ ಜನಮನಕನ್ನಡ ಡಾಟ್ ಕಾಂ ಕಡೆಯಿಂದ ಧನ್ಯವಾದಗಳು… ಈ ಬಾರಿ ಸುಬ್ಬಯ್ಯನಾಯ್ಡು ಅವರ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದಾರೆ… ಓದಿ ಬಿಡಿ

ಸುಬ್ಬಯ್ಯನಾಯ್ಡು ಅವರ ಬಗ್ಗೆ ನಾವೇನು ಹೇಳಬೇಕಾಗಿಲ್ಲ. ಅವರು ಕನ್ನಡ ಚಿತ್ರರಂಗದಲ್ಲಿ ಮಾಡಿರುವ ಸಾಧನೆಗಳೇ ಅವರ ಬಗ್ಗೆ ಹೇಳುತ್ತಾ ಹೋಗುತ್ತದೆ… 1934ರಲ್ಲಿ ತೆರೆಕಂಡ ಕನ್ನಡದ ಮೊಟ್ಟಮೊದಲ ವಾಕ್ ಚಿತ್ರ ‘ಸತಿಸುಲೋಚನ’ ದ ಮೂಲಕ ಸುಬ್ಬಯ್ಯನಾಯ್ಡು ಕನ್ನಡ ಚಿತ್ರರಂಗದ ಚೊಚ್ಚಲ ಹೀರೊ ಎನಿಸಿದರಲ್ಲದೆ ಅಲ್ಲಿಂದಲೇ ಅವರು ಸಿನಿಮಾರಂಗದ ಪಯಣ ಆರಂಭಿಸಿದರು.

21.7.1896ರಂದು ಹಳೆಮೈಸೂರು ರಾಜ್ಯದ ಮಾದಲಾಪುರದ ಎಂ.ವೀರಯ್ಯನಾಯ್ಡು ಮತ್ತು ವೆಂಕಟಮ್ಮ ದಂಪತಿಯ ಪುತ್ರನಾಗಿ ಜನಿಸಿದ ಇವರು ಬಾಲಕನಿದ್ದಾಗಲೇ ನೆರೆಹೊರೆ ಬಂಧುಬಳಗದವರಿAದ ಮಾತಿನಮಲ್ಲನೆಂದೂ  ನಟನಾಸುರನೆಂದೂ ಹೊಗಳಿಸಿಕೊಂಡು ತನ್ನಕಿಲಾಡಿತನದಿಂದ ಶಾಲೆಯಲ್ಲೂ ಹೆಸರುವಾಸಿಯಾಗಿದ್ದ ಬಲುತುಂಟ!. ನಟಿಸಲು ಪೋಷಕರ ವಿರೋಧವಿದ್ದರೂ ಹಬ್ಬಹರಿದಿನಗಳಲ್ಲಿ ತನ್ನಊರಿನ ಸುತ್ತಮುತ್ತ ನಡೆಯುತ್ತಿದ್ದ ಪೌರಾಣಿಕ-ಐತಿಹಾಸಿಕ ನಾಟಕಗಳನ್ನು, ಅದರ ಸಂಭಾಷಣೆಯನ್ನು ಕಂಠಪಾಠ ಮಾಡುತ್ತಿದ್ದ ಆಸಾಮಿ.

ಪ್ರತಿಯೊಬ್ಬ ಪಾತ್ರಧಾರಿಯ ನಟನೆ, ಹಾಡು, ಕಂದ, ಇತ್ಯಾದಿಗಳನ್ನು ಆಸಕ್ತಿ ವಹಿಸಿ ಪಾಠ, ಪ್ರವಚನ, ಪರೀಕ್ಷೆಗಳಿಗೆ ತಯಾರಾಗುವಂತೆ ಶ್ರದ್ಧೆಯಿಂದ ಕಲಿತು ಸಿದ್ಧವಾಗುತ್ತಿದ್ದ ಹುಡುಗ. ಸಮಯ, ಅವಕಾಶ ಸಿಕ್ಕಾಗಲೆಲ್ಲ ಮನೆ, ಬೀದಿ, ಮೈದಾನ, ದೇವಸ್ಥಾನಗಳಲ್ಲಿ, ಪಡಸಾಲೆ ಮೇಲೆ, ಬಂಧುಬಳಗ ಸಹಪಾಠಿಗೆಳೆಯರ ಮುಂದೆ ತನ್ನದೇ ಶೈಲಿ ಮೂಲಕ ನಟಿಸುತ್ತಿದ್ದ ಪೋರ. ಏಕಾಗ್ರತೆಯಿಂದ ಕಲಿತ ಏಕಪಾತ್ರಾಭಿನಯದಿಂದ ಶಹಬ್ಬಾಸ್ ಗಿರಿ ಗಿಟ್ಟಿಸುತ್ತಿದ್ದ ಜಾಣ.

ಪ್ರತಿಯೊಬ್ಬರ ಪ್ರೋತ್ಸಾಹ ಬೆಂಬಲಗಳಿಸಿ ಅಭಿನಯಕಲೆಯನ್ನು ಪಂಚಪ್ರಾಣವಾಗಿಸಿಕೊAಡು ಶಾಲೆ, ಮನೆ, ಮಠ, ಊರು, ತಾಯಿ ತಂದೆ, ಸೋದರ ಸೋದರಿ ಮೇಲೆ ಕೊಂಚ ಪ್ರಾಣ ಇರಿಸಿಕೊಂಡು ಕ್ರಮೇಣ ಬೇರೆಯವರ ಅನುಕರಣೆ ಬಿಟ್ಟು ತಮ್ಮದೇ ಶೈಲಿಯಲ್ಲಿ ಅಭಿನಯಿಸುತ್ತ, ಸಂಭಾಷಣೆ ವರಸೆಯನ್ನ ಸ್ವಂತವಾಗಿಯೇ ಕಲಿತು ಆ ಮೂಲಕ ನಾಯ್ಡು ಸ್ಟೆöÊಲ್, ನಾಯ್ಡು ಯುಗ ಆರಂಭಿಸಿದರು.

1916ರಲ್ಲಿ “ನಾಯ್ಡು ನಾಟಕ ಕಂಪನಿ”  ಪ್ರಾರಂಭಿಸಿ ರಾಜ್ಯದಾದ್ಯಂತ ಅನೇಕ ಕಾರ್ಯಕ್ರಮ ನೀಡಿ ಪ್ರತಿಯೊಂದು ನಾಟಕದಲ್ಲಿ ಉತ್ತಮವಾಗಿ ಅಭಿನಯಿಸಿ ಮೆಚ್ಚುಗೆ ಪಡೆದರು. ತಾವು ಬೆಳೆಯುವುದರ ಜತೆಯಲ್ಲೇ ಇತರರನ್ನೂ ಬೆಳೆಸಿದರು. ನಾಯ್ಡುಗರಡಿಯಲ್ಲಿ ಪಳಗಿದ ಜನಪ್ರಿಯ ಕಲಾವಿದರಲ್ಲಿ ಪ್ರಮುಖರು: ಆರ್.ನಾಗೇಂದ್ರರಾವ್, ಬಿ.ಜಯಮ್ಮ, ದೇವೇಂದ್ರಪ್ಪ, ಸಿAಗನಲ್ಲೂರ ಪುಟ್ಟಸ್ವಾಮಯ್ಯ, ಡಿಕ್ಕಿಮಾಧವರಾವ್, ಬಾಲಕೃಷ್ಣ, ಡಾ.ರಾಜ್, ನರಸಿಂಹರಾಜು, ಮುಂತಾದವರು. ಅನೇಕ ಹೊಸಕಲಾವಿದರನ್ನು ರಂಗಭೂಮಿಗೆ ಮತ್ತು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

1916 ಮೊದಲ ಮಹಾಯುದ್ಧದ ಕಾಲ. ಇಡೀ ದೇಶ ಕ್ಷಾಮದಿಂದ ತತ್ತರಿಸಿತ್ತು. ಬ್ರಿಟಿಷ್ ಸರ್ಕಾರದ ಆದೇಶದಂತೆ ಎಲ್ಲ ಬಗೆಯ ಮನರಂಜನೆ ರದ್ದಾದವು. ಎಲ್ಲೆಡೆಯೂ ರೋಗ ರುಜಿನ ವಕ್ಕರಿಸಿ ದಿನದಿನಕ್ಕೆ ಸಾವು ನೋವು ಹೆಚ್ಚುತ್ತಿತ್ತು! ಸಂಕಷ್ಟದ ಗಂಭೀರ ಪರಿಸ್ಥಿತಿ ನಾಡನ್ನು ಕಾಡುತ್ತಿತ್ತು. ದೇಶದ ನೂರಾರು ನಾಟಕ ಕಂಪನಿಗಳು ಅನಿವಾರ್ಯವಾಗಿ ಕೋಮಾಸ್ಥಿತಿ ತಲುಪಿದವು. ಅಷ್ಟೋತ್ತಿಗಾಗಲೇ ನೂರಾರು ನಾಟಕದಲ್ಲಿ ಅಭಿನಯಿಸಿ ಹಿರಿಯನಟನಾಗಿದ್ದ ಸುಬ್ಬಯ್ಯನಾಯ್ಡುಗೆ ದಿಕ್ಕುತೋಚದಾಯ್ತು.

ತಮ್ಮ ಕಂಪನಿಯಲ್ಲಿ ತಮ್ಮನ್ನೇ ನಂಬಿದ್ದ ನೂರಾರು ಕಲಾವಿದರು ಮತ್ತವರ ಕುಟುಂಬದವರು ನಿರಾಶ್ರಿತರಾಗಲು ಬಿಡಲಿಲ್ಲ! ಆಗತಾನೆ ‘ಮೂಕಿಚಿತ್ರ’ ಯುಗವು ಆರಂಭವಾಗಿತ್ತು. ಒಂದೆರಡು ಮೂಕಿಚಿತ್ರದಲ್ಲಿ ಅಭಿನಯಿಸುವ ಮೂಲಕ ಹಣಕಾಸು ಕಂಡು  ನಿಟ್ಟುಸಿರು ಬಿಟ್ಟರು.ತಮ್ಮ ಕುಟುಂಬದವರೊಡನೆ ಕಂಪನಿ ಕಲಾವಿದರ ಕುಟುಂಬದವರನ್ನೂ  ಪೋಷಣೆ ಮಾಡಿ ‘ಹೃದಯವಂತ’ ಎನಿಸಿಕೊಂಡರು!

ಎಲ್ಲವು ಸುಧಾರಿಸಿದ ಮೇಲೆ 1921ರಲ್ಲಿ ನಟಿ ಲಕ್ಷ್ಮಿ ಬಾಯಿ ಜತೆ ವಿವಾಹವಾಗಿ 4ಮಕ್ಕಳ ತಂದೆಯಾದರು. ಅವರಲ್ಲೊಬ್ಬರೇ ಜನಪ್ರಿಯನಟ ಲೋಕೇಶ್(ಗೆಂಡೆತಿಮ್ಮ). ತರುವಾಯ ಅನೇಕ ನಾಟಕಗಳಲ್ಲಿ ಅಭಿನಯಿಸಿ ನೂರಾರು ಕಲಾವಿದರನ್ನು ಹುಟ್ಟುಹಾಕಿ, ಅವರಿಗೆ ಮಾರ್ಗದರ್ಶಕರಾಗಿ ಅಮೋಘ ಸಾಧನೆ ಮಾಡಿದರು. ಜವರಾಯ ಕರೆವವರೆಗೂ ಕನ್ನಡ ತಮಿಳು ತೆಲುಗು ಸಿನಿಮಾಗಳಲ್ಲಿ ನಟಿಸಿ, ದಕ್ಷಿಣ ಭಾರತದ ಖ್ಯಾತ ನಾಯಕನಟರ ಪಟ್ಟಿಗೆ ಸೇರಿ ರಾಜ್ಯ, ರಾಷ್ಟç ಪ್ರಶಸ್ತಿ ಪುರಸ್ಕಾರ ಪಡೆದರು. ಮಹಾರಾಜರು ಇವರ ಸಿನಿಮಾಗಳನ್ನು ಅರಮನೆ ಪರದೆಮೇಲೆ ನೋಡಿ ಆನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿ ಗೌರವಿಸುತ್ತಿದ್ದರು. ಬ್ರಿಟೀಷ್ ಅಧಿಕಾರಿಗಳು ಸಹ ಇವರ ಸಿನಿಮಾ-ನಾಟಕ ವೀಕ್ಷಿಸಿ ಕೊಂಡಾಡುತ್ತಿದ್ದರು.

ಹುಟ್ಟುಕಲಾವಿದ ಸುಬ್ಬಯ್ಯನಾಯ್ಡು ಮೂಕಿಟಾಕಿ ಸಿನಿಮಾ ಮತ್ತು ನಾಟಕಕಂಪನಿ ಮಾಲೀಕ, ನಟ, ನಿರ್ಮಾಪಕ, ನಿರ್ದೇಶಕರಾಗಿ, ಓರ್ವ ಮಾನವನಾಗಿ 50 ವರ್ಷಕ್ಕೂ ಹೆಚ್ಚುಕಾಲ ಸಾರ್ಥಕ ಸೇವೆಸಲ್ಲಿಸಿ 21.7.1962ರಂದು ವಿಧಿವಶರಾಗಿ ಅಮರರಾದರು. ಇವರ ಮಗ ಲೋಕೇಶ್, ಸೊಸೆ ಗಿರಿಜಾಲೋಕೇಶ್, ಮೊಮ್ಮಗ ಸೃಜನಲೋಕೇಶ್, ಮೊಮ್ಮಗಳು ಪೂಜಾಲೋಕೇಶ್, ಗಣನೀಯ ಕಲಾಸೇವೆಗೈದು ಯಶಸ್ಸುಗಳಿಸಿ ಸುಬ್ಬಯ್ಯನಾಯ್ಡು ಕೀರ್ತಿಯನ್ನು ಚಿರಸ್ಥಾಯಿಗೊಳಿಸಿದ್ದಾರೆ.

ಸುಬ್ಬಯ್ಯನಾಯ್ಡು ನಟಿಸಿದ ಚಿತ್ರಗಳು: ಸತಿಸುಲೋಚನ, ವಸಂತಸೇನ, ಸತ್ಯಹರಿಶ್ಚಂದ್ರ, ಮಹಾತ್ಮಕಬೀರ್, ಭೂಕೈಲಾಸ, ಧರ್ಮಸ್ಥಳಮಹಾತ್ಮೆ.

 

admin
the authoradmin

Leave a Reply