LatestMysore

ಕಾಳಮ್ಮನ ಕೊಪ್ಪಲಲ್ಲಿ ಶ್ರೀ ಭಗೀರಥ ಉಪ್ಪಾರರ ಸಂಘದಿಂದ ಭಗೀರಥ ಜಯಂತಿ ಆಚರಣೆ

ಸಾಲಿಗ್ರಾಮ(ಸಂಘಟನೆ ಮಂಜುನಾಥ್): ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಶ್ರೀ ಭಗೀರಥ ಉಪ್ಪಾರರ ಸಂಘದ ವತಿಯಿಂದ ಶ್ರೀ ಭಗೀರಥ ಜಯಂತೋತ್ಸವವನ್ನು  ಶ್ರೀ ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ತಳಿರು ತೋರಣ ಹಾಗೂ ಹೂವಿನಿಂದ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡುವ ಮೂಲಕ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಎಂ.ಶಿವಣ್ಣ, ರಂಗೇಗೌಡ, ಜ.ರಾಮೇಗೌಡ, ದೇವೇಗೌಡ, ಕೆ.ಟಿ.ಶಿವಣ್ಣ, ಕೃಷ್ಣೆಗೌಡ, ತಮ್ಮೇಗೌಡ, ಕಾ.ರಾಮೇಗೌಡ, ಕೆ.ಟಿ.ಮೋಹನ್ ಕುಮಾರ್, ಕೆ.ಎ.ನಾಗರಾಜು, ಸ್ವಾಮಿಗೌಡ, ಕೆಇಬಿ ದೇವರಾಜು, ಕೆ.ಡಿ.ರಂಗೇಗೌಡ, ಕೆ.ಎನ್.ಪವನ್, ಅಶೋಕ, ಮಹದೇವ, ಪ್ರದೀಪ್, ಸ್ವಾಮಿ, ರಾಜು, ಕುಮಾರ್, ರಾಜೇಗೌಡ, ರಂಗೇಗೌಡ ಸೇರಿದಂತೆ ಹಲವರು ಇದ್ದರು.

ಸಚಿವ ಮಹದೇವಪ್ಪರವರಿಗೆ ಕೆ ಆರ್ ನಗರ – ಸಾಲಿಗ್ರಾಮ ತಾಲೂಕಿನ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಸಲ್ಲಿಕೆ

admin
the authoradmin

Leave a Reply

Translate to any language you want