
ಕೆ. ಆರ್ ನಗರ: ಪಟ್ಟಣದ ಕನಕ ಗುರು ಪೀಠದ ಶಾಖಾ ಮಠದಲ್ಲಿ ಸೋಮವಾರ ನಡೆದ ಅಹಲ್ಯಾ ಹೋಳ್ಕಲ್ ಮತ್ತು ಕಾಗಿನೆಲೆ ಕನಕ ಗುರು ಪೀಠ ಮೈಸೂರು ಶಾಖಾ ಮಠದ ಶಿವಾನಂದ ಪುರಿ ಶ್ರೀಗಳ 66ನೇ ವರ್ಷದ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಪತ್ರಕರ್ತ ಸಂಘಟನೆ ಮಂಜುನಾಥ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹುಣಸೂರು ಶಾಸಕರಾದ ಜಿ ಡಿ ಹರೀಶ್ ಗೌಡ, ಪತ್ನಿ ವರ್ಷ ಗೌಡ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಹರಗು ಮತ್ತು ಬಣ್ಣ ನಿಗಮದ ಅಧ್ಯಕ್ಷ ಹೆಚ್.ಡಿ.ಗಣೇಶ್, ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಆರ್ ಟಿಒ ರಾಜ್ಯ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಹುಣಸೂರು ನಗರ ಸಭೆ ಮಾಜಿ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ, ಬೆಟ್ಟದಪುರ ಸಲಿಲಾಕ್ಯ ಮಠದ ಚನ್ನಬಸವದೇಶಿಕೇಂದ್ರಸ್ವಾಮೀಜಿ, ಲಾಲನಹಳ್ಳಿ ಮಠದ ಜಯದೇವಿತಾಯಿ, ಸಿದ್ದರೂಢ ಮಠದ ರಮಾನಂದಸ್ವಾಮೀಜಿ, ಯಶವಂತಶ್ರೀ ಸೇರಿದಂತೆ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.
ಶಿವಾನಂದ ಪುರಿ ಸ್ವಾಮೀಜಿಗಳ ಸಮಾಜ ಮುಖಿ ಚಿಂತನೆ, ಜನಸೇವೆ ಸಮಾಜಕ್ಕೆ ಮಾದರಿ: ಜಿ.ಡಿ.ಹರೀಶ್ ಗೌಡ








