janamanakannada > Blog > Latest > Mysore > ರಾಜಕೀಯ ಪ್ರಜ್ಞೆ ಜಾಗೃತಿಯಿಂದ, ಅವಕಾಶ ವಂಚಿತ ಸಮುದಾಯಗಳಿಗೆ ಸಿಂಹಬಲ: ರಘು ಕೌಟಿಲ್ಯ
ಮೈಸೂರು: ಸವಿತಾ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು, ಸಮಾಜ ಸೇವಕರಾದ ಶ್ರೀ ಹರೀಶ್ ರೆಡ್ಡಿ ಸ್ನೇಹ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಶ್ರೀ ರಘು ಕೌಟಿಲ್ಯ ಭಾಗವಹಿಸಿದ್ದರು. ಹರೀಶ್ ರೆಡ್ಡಿ ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನ ನಿಕಟ ಪೂರ್ವ ಅಧ್ಯಕ್ಷ ರಾದ ಅಪ್ಪಣ್ಣ ಆಗಮಿಸಿದ್ದರು.

ವಿಶೇಷ ಆಹ್ವಾನಿತರಾಗಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಎನ್ ಆರ್ ನಾಗೇಶ್, ಎಪಿಎನ್ ಪ್ರಾಪರ್ಟೀಸ್ ಮಾಲೀಕರಾದ ನಾಗೇಶ, ಮುಖಂಡರಾದ ನಾಗೇಂದ್ರ, ಮುರಳೀಧರ, ರಾಜು ರೆಡ್ಡಿ, ಮಂಜುನಾಥ, ಧನರಾಜ್, ರಾಜೇಶ್, ಕೇಶವ, ಆರ್ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೈ ನಾ ಲೋಕೇಶ್ ವಂದಿಸಿದರು.




admin








