LatestMysore

ಗದಗದಲ್ಲಿ ಗಮನ ಸೆಳೆದ ಸಂಗೀತೋತ್ಸವ… ಹಾಡಿಗೆ ತಲೆದೂಗಿದ ಸಂಗೀತ ಪ್ರೇಮಿಗಳು

ಸಂಗೀತ ಎಲ್ಲರಿಗೂ ಒಲಿಯುವುದಿಲ್ಲ: ಡಾ.ಟಿ.ಎನ್.ಗೋಡಿ

ಗದಗ : ಸಂಗೀತ ಎಲ್ಲರಿಗೂ ಒಲಿಯುವುದಿಲ್ಲ. ಸತತ ಪರಿಶ್ರಮದ ಅಭ್ಯಾಸದ ಮೂಲಕ ಮಾತ್ರ ಸಂಗೀತ ಸಿದ್ಧಿಯನ್ನು ಪಡೆಯಲು ಸಾಧ್ಯ ಎಂದು ಕೆ.ಎಸ್.ಎಸ್. ಮಹಾವಿದ್ಯಾಲಯದ  ನಿವೃತ್ತ ಪ್ರಾಚಾರ್ಯ  ಡಾ.ಟಿ.ಎನ್.ಗೋಡಿ ಹೇಳಿದರು.

ಶ್ರೀಶಾರದಾ ಸಂಗೀತ ಸಾಂಸ್ಕೃತಿಕ ಕಲಾ ಸಂಘ(ರಿ) ಗದಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು  ಇವರ ಸಹಯೋಗದಲ್ಲಿ    ಗದಗದ ವಿವೇಕಾನಂದ ಬಡಾವಣೆಯ ಮೂರನೇ ಮುಖ್ಯ ರಸ್ತೆಯಲ್ಲಿರುವ ಹರ್ಷ ಬಿಲ್ಡಿಂಗ್‌ನಲ್ಲಿ  ನಡೆದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ. ಕಳೆದ ಹತ್ತು ವರ್ಷಗಳಿಂದ ಕಷ್ಟಪಟ್ಟು ಯುವ ಕಲಾವಿದರನ್ನು ವೇದಿಕೆ ಮೂಲಕ ನಾಡಿಗೆ ಪರಿಚಯಿಸುವ ಕಾರ್ಯ ಮಾಡುತ್ತಿರುವದು ಶ್ಲಾಘನೀಯ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಶಾರದಾ ಸಂಗೀತ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಎಂ.ಟಿ.ಹರಗದ ಅವರು ಮಾತನಾಡಿ ಇಂದಿನ ಕಾಲದಲ್ಲಿ ಯುವ ಜನಾಂಗ ಸುಗಮ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಕಡಿಮೆ ಆಸಕ್ತಿ ಹೊಂದಿದೆ. ಸಾಹಿತ್ಯ ಸಂಗೀತ ಕಲೆಯ ನಾಡು ಗದಗ ಎಂಬುದು ಹೆಮ್ಮೆಯ ಸಂಗತಿ. ಸಂಗೀತಕ್ಕೆ ಎಲ್ಲ ಕಾಲದಲ್ಲೂ ಗೌರವ ಇದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀಮತಿ  ಭುವನೇಶ್ವರಿ ಹಿರೇಮಠ, ಸುರೇಖಾ ವ್ಹಿ ಜಕ್ಕಲಿ, ಶ್ರೀಮತಿ ವಿಜಯಲಕ್ಷ್ಮಿ ಟಿ ಗೋಡಿ, ಶ್ರೀಮತಿ ವಿಜಯಲಕ್ಷ್ಮಿ ಎಸ್ ಬೆಂತೂರ ಸುಗಮ ಸಂಗೀತ ಅಮೋಘವಾಗಿತ್ತು ಇವರಿಗೆ  ತಬಲಾ ಸಾಥ್ ಮುದ್ಲಾಪೂರ ನೀಡಿದರು. ಅನ್ವಿತಾ ವಿಶ್ವನಾಥ ತೆಗ್ಗಿ, ವೇದಾ ಉ ಜಕ್ಕಲಿ, ಋತ್ವಿಕಾ ವ್ಹಿ ಸಜ್ಜನ, ಕಾರ್ತಿಕ ಪಿ ಜಕ್ಕಲಿ, ಹರ್ಷಿಣಿ ಪಿ ಜಕ್ಕಲಿ, ವಿಶ್ವನಾಥ ವ್ಹಿ ಜಕ್ಕಲಿ, ಯಶವಂತ ವ್ಹಿ ಜಕ್ಕಲಿ, ಸಿಂಚನಾ ಎಸ್ ಸಜ್ಜನ  ಅವರ ಭರತನಾಟ್ಯ ಪ್ರೇಕ್ಷಕರ ಗಮನ ಸೆಳೆದವು.

ಶ್ರೀಮತಿ ಭುವನೇಶ್ವರಿ ಹಿರೇಮಠ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಸಜ್ಜನರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಸಂಗಮೇಶ ಸಜ್ಜನರ ಸ್ವಾಗತಿಸಿದರೆ ಕೊನೆಯಲ್ಲಿ ಪ್ರೊ. ಎಚ್.ಎನ್.ಕಾಳೆ ನಿರೂಪಿಸಿದರು.

admin
the authoradmin

Leave a Reply