janamanakannada > Blog > Latest > Mysore > ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಸಂಘಟನೆ ಮಂಜುನಾಥ್ ಗೆ ಆತ್ಮೀಯ ಸನ್ಮಾನ
ಕೆ.ಆರ್.ನಗರ ಮತ್ತು ಸಾಲಿಗ್ರಾಮ ವ್ಯಾಪ್ತಿಯಲ್ಲಿ ಪತ್ರಿಕೆಗಳಿಗೆ ಸುದ್ದಿ ಸಂಗ್ರಹಿಸುತ್ತಾ ಕ್ರಿಯಾಶೀಲ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ಮಂಜುನಾಥ್ ಅವರಿಗೆ ಅವರ ಸೇವಾ ವೈಖರಿಯನ್ನು ಪರಿಗಣಿಸಿ ತಾಲೂಕು ಆಡಳಿತದಿಂದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ಪ್ರದಾನ ಮಾಡಿ ಸನ್ಮಾನಿಸಲಾಗಿದೆ.

ಇದೀಗ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸುತ್ತಿವೆ. ಅದರಂತೆ ಸಾಲಿಗ್ರಾಮ ತಾಲೂಕು ಮೂಡಲಬೀಡು ಗ್ರಾಮದಲ್ಲಿ ಅವರ ಸೋದರ ಮಾವ ಪ್ರಥಮ ದರ್ಜೆ ಗುತ್ತಿಗೆದಾರರಾದ ಹರ್ಷ ಕುಮಾರ್ ಗೌಡ ಹಾಗೂ ಕುಟುಂಬಸ್ಥರು ಪತ್ರಕರ್ತ ಸಂಘಟನೆ ಮಂಜುನಾಥ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
Tags:k r nagar news
admin








