LatestNews

ವಿಶ್ವ ಬೈಸಿಕಲ್ ದಿನ ಪ್ರಯುಕ್ತ 1000 ಬೈಸಿಕಲ್ ಮತ್ತು 2000 ಸಾವಿರ ಜನರಿಂದ ವಾಕಥಾನ್… ಏನಿದರ ವಿಶೇಷ?

ಬೆಂಗಳೂರು: ಕಿತ್ತೂರು ರಾಣಿ ಚನ್ನಮ್ಮ ದಿನಾಚರಣೆ ವಿಶ್ವ ಬೈಸಿಕಲ್ ದಿನಾಚರಣೆ ಮತ್ತು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬಿ.ಎನ್.ಎಂ.ತಂತ್ರಜ್ಞಾನ ಸಂಸ್ಥೆ ಮತ್ತು ವಿಕಾಸನಾ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ 1000 ಬೈಸಿಕಲ್ ಮತ್ತು 2000 ಸಾವಿರ ಜನರ ವಾಕಥಾನ್   ಕಾರ್ಯಕ್ರಮದಲ್ಲಿ ಪ್ರತಿದಿನ ಒಂದು ಕ್ರೀಡಾ ಚಟುವಟಿಕೆ, ಯೋಗ ವ್ಯಾಯಾಮ ಮಾಡಿ, ಆರೋಗ್ಯ ಜೀವನ ಕಾಪಾಡಿಕೊಳ್ಳಿ ಎಂಬ ಸಂದೇಶವನ್ನು ರವಾನಿಸಲಾಯಿತು.

1000 ಬೈಸಿಕಲ್ ಮತ್ತು 2000 ಸಾವಿರ ಜನರ ವಾಕಥಾನ್ ಗೆ ಮಾಜಿ ಆಡಳಿತ ಪಕ್ಷದ ನಾಯಕರು, ಜಯನಗರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷರಾದ ಎನ್.ನಾಗರಾಜುರವರು ಚಾಲನೆ ನೀಡಿದರು, ವಿಕಾಸನ ಫೌಂಡೇಷನ್ ಹರಿಪ್ರಸಾದ್ ಸಾಥ್ ನೀಡಿದ್ದರು.  ಇದೇ ಸಂದರ್ಭದಲ್ಲಿ ಮಾತನಾಡಿದ ಎನ್.ನಾಗರಾಜುರವರು ಬೆಂಗಳೂರುನಗರಕ್ಕೆ ಗ್ರೀನ್ ಸಿಟಿ ಎಂಬ ಖ್ಯಾತಿ ಇದೆ, ಹಸಿರು ಬೆಂಗಳೂರು ಉಳಿಯಬೇಕು ಮತ್ತು ಎಲ್ಲರೂ ಆರೋಗ್ಯವಂತರಾಗಿ ಇರಬೇಕು ಎಂದರೆ ಪ್ರತಿದಿನ 1ಗಂಟೆ ಯೋಗ, ವ್ಯಾಯಾಮ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಈ ನಿಟ್ಟಿನಲ್ಲಿ ಸಚಿವರಾದ ರಾಮಲಿಂಗಾರೆಡ್ಡಿರವರ ಮಾರ್ಗದರ್ಶನ ಮತ್ತು ಮಾಜಿ ಶಾಸಕಿ ಸೌಮ್ಯ ರೆಡ್ಡಿ ಸಹಕಾರದಿಂದ ಕ್ರೀಡಾಕ್ಷೇತ್ರಕ್ಕೆ ಉತ್ತೇಜನ ನೀಡಲು ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣವನ್ನು 35ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.ಬೆಂಗಳೂರಿನ ಮಾದರಿ ಹೈಟೆಕ್ ಕ್ರೀಡಾಂಗಣ ಎಂಬ ಖ್ಯಾತಿ ಪಡೆದಿದೆ ಮತ್ತು ಜಯನಗರ, ನಗರದ ಕ್ರೀಡಾಪಟುಗಳು ,ಸಾರ್ವಜನಿಕರಿಗೆ ಸಹಕಾರಿಯಾಗಿದೆ. 3ನೇ ತಾರೀಖು ವಿಶ್ವ ಬೈಸಿಕಲ್ ದಿನ ಮತ್ತು 5ನೇ ತಾರೀಖು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜನ ಜಾಗೃತಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕೊರೋನ ಬಂದ ನಂತರ ಯುವಕರು, ಹಿರಿಯರ ಆರೋಗ್ಯದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಹೃದಯ ತೊಂದರೆ ಅಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ರೋಗದಿಂದ ಮುಕ್ತರಾಗಲು ಉತ್ತಮ ಆಹಾರ ಪದ್ದತಿ ಹಾಗೂ ಸೈಕಲ್ ತುಳಿಯುವುದು, ವಾಕಿಂಗ್ ಮಾಡುವುದರಿಂದ ದೃಹಿಕವಾಗಿ, ಮಾನಸಿಕವಾಗಿ ಆರೋಗ್ಯವಂತರಾಗಿ ಬಾಳಬಹುದು ಎಂದು ಹೇಳಿದರು. ಇದೇ ವೇಳೆ ಬೈಸಿಕಲ್ 8ಕಿಲೋ ಮೀಟರ್ ವರಗೆ ಸಾಗಿದರು, ವಾಕಥಾನ್ 3ಕಿಲೋ ಮೀಟರ್ ವರೆಗೂ ಸಾಗಿತು.

admin
the authoradmin

Leave a Reply