ಕುಶಾಲನಗರ: ದೇವನೊಬ್ಬ ನಾಮ ಹಲವು.. ಎಲ್ಲಾ ಧರ್ಮಗಳ ಸಾರ ಒಂದೇ… ಹುಟ್ಟುವಾಗ ಯಾವುದೇ ಶಿಶು ಜಾತಿ ನೋಡಿಕೊಂಡು ಹುಟ್ಟಲ್ಲ. ಕಣ್ಣಿಗೆ ಕಾಣದ ಆ ಅಗೋಚರ ಶಕ್ತಿಯ ಬಳಿ ಯಾರೂ ಕೂಡ ಇಂತಹುದೇ ಜಾತಿ – ಧರ್ಮದಲ್ಲಿ ಹುಟ್ಟಿಸು ಅಂತಾ ಅಪ್ಲಿಕೇಶನ್ ಹಾಕಿರುವುದೂ ಇಲ್ಲ. ರಾಜಕಾರಣ ಹಾಗೂ ರಾಜಕಾರಣಿಗಳು ಧರ್ಮಗಳ ಮಧ್ಯೆ ಒಡಕುಂಟು ಮಾಡಿದ ಫಲ ಸ್ವಸ್ಥ ಹಾಗೂ ಸ್ವಚ್ಛವಾಗಿದ್ದ ಸಮಾಜದ ಸ್ವಾಸ್ಥ್ತ ಕದಡಿದೆ ಅಷ್ಟೆ.
ಕುಶಾಲನಗರದಲ್ಲಿ ಈ ಬಾರಿ ನಡೆಯುತ್ತಿರುವ ಹನುಮಜಯಂತಿ ಒಂದು ರೀತಿ ಯುವಜನೋತ್ಸವದ ಮಾದರಿಯಲ್ಲಿ ಇರುಳನ್ನು ಹಗಲಾಗಿಸಿ ನಡೆಯುತ್ತಿರುವ ಬೆಳಕಿನ ಮಹಾ ಉತ್ಸವ. ಜೊತೆಗೆ, ಬಿಸಿ ರಕ್ತದ ನವತರುಣರಿಗೆ ಕ್ಷೇತ್ರದ ಯುವ ಶಾಸಕ ಡಾ.ಮಂತರಗೌಡರು ವಿಶೇಷವಾಗಿ ಸಾಥ್ ಕೊಟ್ಟ ಮೇಲಂತೂ ಈ ಉತ್ಸವ ಆಗುತ್ತಿದೆ ಜನೋತ್ಸವ. ಹನುಮ, ರಾಮ, ಶಬರಿ, ಸೀತೆ ಯರು ಕೇವಲ ಒಂದು ಧರ್ಮ ಅಥವಾ ಪಕ್ಷವೊಂದರ ಆಸ್ತಿ – ಆಚರಣೆಯಲ್ಲ. ಅದಕ್ಕೆ ಪಕ್ಷಾತೀತ ಜಾತ್ಯತೀತದ ಸ್ವರೂಪ ಕೊಟ್ಟದ್ದು ಶಾಸಕ ಡಾಕ್ಟರ್ ಮಂಥರ್ ಗೌಡ

ಈ ಬಾರಿ ನಡೆವ ಮಹಾ ಉತ್ಸವಕ್ಕೆ ಅನ್ಯಧರ್ಮೀಯ ಯುವಕರ ಶುಭ ಕೋರಿಕೆ ಬಾಹ್ಯವಾಗಿ ಪೋಲಿಸರ ತಲೆ ನೋವು ಕಡಿಮೆ ಮಾಡಿದೆ. ಆದರೆ, ಅಂತರಂಗದಲ್ಲಿ ಎಲ್ಲಾ ಧರ್ಮೀಯರು ಎಲ್ಲಾ ಧರ್ಮಗಳ ಆಚರಣೆಗೆ ಪರಸ್ಪರ ಸಾಥ್ ನೀಡುವ ಮೂಲಕ ನಗರವನ್ನು ಸರ್ವಧರ್ಮಗಳ ಶಾಂತಿಯ ತೋಟವಾಗಿಸಬೇಕಿದೆ.
-ಕೆ.ಎಸ್.ಮೂರ್ತಿ, ಕುಶಾಲನಗರ








