Mysore

ಮೈಸೂರಿನ ಗಂಗೋತ್ರಿ ಪಬ್ಲಿಕ್  ಶಾಲೆಯಲ್ಲಿ ಅದ್ಧೂರಿ ಗಣರಾಜ್ಯೋತ್ಸವ ಆಚರಣೆ   

ಮೈಸೂರು: ಮೈಸೂರಿನ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ  ಧ್ವಜಾರಾಹೋಣ ಮಾಡುವುದರ ಮೂಲಕ   ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಡಾ. ವಿಜಯ್ ಕುಮಾರ್ ಬಿ.ಆರ್.ಪಿ ಲಕ್ಷ್ಮಿಪುರಂ ಕ್ಲಸ್ಟರ್ ಮೈಸೂರು ಹಾಗೂ ಪ್ರಕಾಶ್ ಸಿ ಆರ್ ಪಿ ಲಕ್ಷ್ಮಿಪುರಂ ಕ್ಲಸ್ಟರ್ ಮೈಸೂರು  ಆಗಮಿಸಿ ಮಾತನಾಡಿ, ಸ್ವಾತಂತ್ರ್ಯದ ಹಿನ್ನೆಲೆ, ಸ್ವಾತಂತ್ರ್ಯದ  ಪ್ರಾಮುಖ್ಯತೆ ಸಂವಿಧಾನದ ರಚನಾ ಸಮಯ, ಗಣರಾಜ್ಯೋತ್ಸವದ ಪ್ರಾಮುಖ್ಯತೆ, ಹಾಗೂ ಜೀವನ ಅಭಿವೃದ್ಧಿ, ಛಲ, ಗುರಿ, ಸಾಧನೆ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಗೌರವಾನ್ವಿತ ಅಧ್ಯಕ್ಷರಾದ ಟಿ ರಂಗಪ್ಪ, ದುಷ್ಯಂತ್ ಎಂ.ಆರ್ ಗಂಗೋತ್ರಿ ಎಜುಕೇಶನ್ ಟ್ರಸ್ಟ್ ಡೈರೆಕ್ಟರ್. ಪ್ರಾಂಶುಪಾಲರಾದ ಸುನಿಲ್ ಕುಮಾರ್, ಶಾಲಾ ಮುಖ್ಯೋಪಾಧ್ಯಾಯರಾದ ಮೊಹಮ್ಮದ್ ಫಾರೂಕ್,  ಶಿಕ್ಷಕ ವೃಂದದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  ಸಿಹಿ ವಿತರಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು

ಮೈಸೂರಿನ ಹಿಂದೂಸ್ಥಾನ್ ಕಾಲೇಜಿನಲ್ಲಿ ಪ್ರಚಾರೋಪನ್ಯಾಸ ಕಾರ್ಯಕ್ರಮ…

admin
the authoradmin

ನಿಮ್ಮದೊಂದು ಉತ್ತರ

Translate to any language you want