ArticlesLatest

ಹೆಣ್ಣು ಬರೀ ಹೆಣ್ಣಲ್ಲ ಜಗದ ಕಣ್ಣು..  ಈ ಕ್ಷಣದಿಂದಲೇ  ಆಕೆಗೆ ಶರಣುಶರಣಾರ್ಥಿ ಎನ್ನೋಣ…

ಹೆಣ್ಣನ್ನು ನಾವು ದೇವತೆಯಾಗಿ ಪೂಜಿಸುತ್ತೇವೆ… ಆಕೆಯಿಲ್ಲದ ಬದುಕನ್ನು ಊಹಿಸಿಕೊಳ್ಳುವುದು ಅಸಾಧ್ಯವೇ… ಹೀಗಿರುವಾಗ ಆಕೆಗೊಂದು ದಿನ ಸಾಕಾ? ಪ್ರತಿ ಕ್ಷಣ… ದಿನವೂ ಆಕೆಯದ್ದಾಗ ಬೇಕು.. ಪೌರಾಣಿಕ, ಇತಿಹಾಸಗಳನ್ನು ತೆರೆದು ನೋಡಿದರೆ ಈ ಭೂಮಿ ಮೇಲೆ ಏನೆಲ್ಲ ಆಗಿದೆಯೋ ಅದಕ್ಕೆಲ್ಲವೂ ಹೆಣ್ಣೇ ಆಗಿದ್ದಾರೆ…  ಹೀಗಾಗಿ ಆಕೆ ಒಲಿದರೆ ನಾರಿ… ಮುನಿದರೆ ಮಾರಿ… ಮಾತುಗಳು ಪ್ರಚಲಿತದಲ್ಲಿದೆ… ಅದರಾಚೆಗೆ ಆಕೆ ಬರೀ ಹೆಣ್ಣಲ್ಲ.. ಮಮತೆ, ಕರುಣೆ ಎಲ್ಲವನ್ನೂ ತನ್ನೊಳಗಿಟ್ಟುಕೊಂಡ ಕಣ್ಣಿಗೆ ಕಾಣುವ ದೇವತೆಯೇ…  ಹೆಣ್ಣೆಂದರೇನು?  ಎಂಬುದನ್ನು ತಮ್ಮ ಕವನದ ಮೂಲಕ ಕುಮಾರಕವಿ ನಟರಾಜ್ ಅವರು ತೆರೆದಿಟ್ಟಿದ್ದಾರೆ… ಈ ಕವನ ಮಹಿಳಾ ದಿನಾಚರಣೆಯ ಆಚೆಗೂ ಸರ್ವ ಕಾಲಕ್ಕೂ ಸಲ್ಲುವಂತಹದ್ದಾಗಿದೆ… ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ…

ಅಷ್ಟಲಕ್ಷ್ಮಿ ಸರಸ್ವತಿ ಅನ್ನಪೂರ್ಣೇ ಚಂಡಿ

ಆದಿಶಕ್ತಿ ಮಾರಿ ಮಸಣಮ್ಮ ಚಾಮುಂಡಿ

ಇತ್ಯಾದಿ ಹೆಣ್ಣುದೇವರುಗಳೆ ಬಹುಸಂಖ್ಯಾತ

ಬಲು ಜನಪ್ರಿಯವುಳ್ಳ ಬಹುಜನ ಪೂಜಿತ

ಪವಾಡವಿರೊ ವರವಕೊಡೊ ಕೋಟಿದೇವತ

ಸೀತಾಯಣ ಪಾಂಚಾಲೀ ಮಹಾಭಾರತ

ನಮ್ತಾಯಿ ಭೂತಾಯಿ ಭವ್ಯಭರತಮಾತ….

ಆರತಿಗೆ ಒಂದು ಹೆಣ್ಣು ಇರಲೆಂದೂ

ಕೀರುತಿಗೆ ಒಂದು ಗಂಡು ಇರಲೆಂದು

ಸರ್ಕಾರೀ ಘೋಷಿತ ಚೆನ್ನುಡಿಯಿದು

ಹೆಣ್ಣುಮಕ್ಕಳಿಂದ ಬಳಗವು ಹೆಚ್ಚುತ್ತದೆ

ಗಂಡುಮಕ್ಕಳಿಂದ ಕರಗವು ಮೆರೆಯುತ್ತದೆ

ಹೆಣ್ಣುಮಕ್ಕಳು ಅಸ್ತಿಗೇ ಬಡಿದಾಡುವರು

ಗಂಡುಮಕ್ಕಳು ಆಸ್ತಿಗೆ ಹೊಡೆದಾಡುವರು

ಹೆಣ್ಣುಮಕ್ಕಳು ಹಂಚಿ ಉಣ್ಣುವರು

ಗಂಡುಮಕ್ಕಳು ಹೊಂಚಿ ತಿನ್ನುವರು….

ಹೆಣ್ಣುಮಕ್ಕಳಿದ್ದರೆ ಸೊಬಗು ಹೆಚ್ಚುತ್ತದೆ

ಹೆಣ್ಣೊಂದು ನಕ್ಕರೆ ಇಳೆಯು ನಗುತ್ತದೆ

ಹೆಣ್ಣೊಂದು ಕಲಿತರೆ ಶಾಲೆ ಉಳಿಯುತ್ತದೆ

“ಒಲಿದರೆ ನಾರಿ ಮುನಿದರೆ ಮಾರಿ” ಗಾದೆ

ಸತ್ಯ, ತ್ರೇತಾ, ದ್ವಾಪರಾ, ಕಲಿ ಯುಗದ

ಭೂತ ವರ್ತಮಾನ ಭವಿಷ್ಯತ್ ಕಾಲದ

ಸರ್ವಕ್ಷಣದಲ್ಲು ಸಕಲಭೂಷಣ ಸರ್ವದಾ

ಸುರಾಸುರ ನರವಾನರ ಜೀವ-ಜೀವನದಾ…

ಅಳಿವು ಉಳಿವು ನೋವು ನಲಿವು

ಸೋಲು ಗೆಲುವು ಹುಟ್ಟು ಸಾವು

ಎಲ್ಲಕ್ಕು ಎಲ್ಲರಿಗು ಸದಾ ಸರ್ವಮಾನ್ಯ

ಅಜಾತಶತ್ರು ಅನನ್ಯಮಿತ್ರ ಅಸಾಮಾನ್ಯ

ತಂತ್ರಿಮಂತ್ರಿ ಹೆಣ್ಣಿಲ್ಲದೆ ಎಲ್ಲವೂ ಶೂನ್ಯ

ಈ ಕ್ಷಣದಿಂದಲೆ ಪ್ರತಿಯೊಬ್ಬರೂ ಸಹ ಹೆಣ್ಣಿಗೆ

ಶರಣುಶರಣಾರ್ಥಿ ಎನ್ನೋಣ ಈ ಜಗದ ಕಣ್ಣಿಗೆ

 

ಮಹಿಳಾ ದಿನಾಚರಣೆ ವಿಶೇಷಗಳು

ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ-ಕುಟುಂಬದ ನಡುವೆ ವೈದ್ಯೆಯರು ಸಮತೋಲನ ಸಾಧಿಸುವುದು ಹೇಗೆ?

ನಾರಿಯು ಸಮಾಜದ ಚುಕ್ಕಾಣಿಯನ್ನು ಹಿಡಿದು ಅಭಿವೃದ್ಧಿ ಕಡೆಗೆ ಕರೆದೊಯ್ಯುವ ಮಹಾಸಾಧಕಿ…

ಮಹಿಳೆ ಅಬಲೆಯಲ್ಲ…. ಅವಳು ಸಮಾಜದ ಮಹಾಶಕ್ತಿ… ಅವಳಿಗೊಂದು ಸಲ್ಯೂಟ್

admin
the authoradmin

15 Comments

  • Mahila dinacharane prayukta kumarakavi nataraja ravara kavana bahala sogasagide, dhanyavadagalu sir ♥ ❤
    Smt CHANDANA RAO, KANNADA SAHITYA PARISHAT, BENGALURU.

  • Kumarakavi nataraja ravaru barediruva Kavita very very meaningful. Thanks sir, 👍 🙏 DAKSHAYINI PRABHAKAR, VANIVILASA ROAD, MYSORE.

  • ಮಹಿಳಾ ದಿನಾಚರಣೆ ಕುರಿತಂತೆ ಕುಮಾರಕವಿಯವರ ಕವನ ಹೆಣ್ಣುಜಗದಕಣ್ಣು ಬಹಳ ಅರ್ಥಪೂರ್ಣವಾಗಿದ್ದು ಇವರಿಗೆ ಮನಸಾರೆ ನಮಸ್ಕಾರ ಸಲ್ಲಿಸೋಣ. ಶುಭವಾಗಲಿ. ಗಾಯತ್ರಿ, ನಿವೃತ್ತ ಮೇನೇಜರ್, ಮೈಸೂರು ಕೊಆಪರೇಟಿವ್ ಬ್ಯಾಂಕ್
    ಗಾಂಧಿ ಚೌಕ, ಮೈಸೂರು.

  • Nammellara gouravanvita nataraj kavigalu rachisida kavana khandita sogasagide, anekaneka namaskaragalu.
    Shwetha Siddaraj, Bengaluru

  • Nammellara gouravanvita nataraj kavigalu rachisida MAHILA DINACHARANE kavana sogasagide, aneka namaskaragalu.
    Shwetha Siddaraj, Bengaluru

  • Very meaningful poetry about INTERNATIONAL WOMEN’S DAY by NATRAJ sir, 👏👏👏🙏🙏🌹Kavita shenoy, Mumbai

  • Nammellara gouravanvita nataraj kavigalu rachisida MAHILA DINACHARANE kavana sogasagide, aneka namaskaragalu. Shwetha Siddu, Bengaluru

  • ಮಹಿಳಾ ದಿನಾಚರಣೆ ಕುರಿತಂತೆ ಕುಮಾರಕವಿಯವರ ಕವನ ಹೆಣ್ಣುಜಗದಕಣ್ಣು ಬಹಳ ಅರ್ಥಪೂರ್ಣವಾಗಿದ್ದು ಇವರಿಗೆ ಮನಸಾರೆ ನಮಸ್ಕಾರ ಸಲ್ಲಿಸೋಣ. ಶುಭವಾಗಲಿ. ಗಾಯತ್ರಿ, ನಿವೃತ್ತ ಮೇನೇಜರ್, ಮೈಸೂರು ಕೊಆಪರೇಟಿವ್ ಬ್ಯಾಂಕ್, ಗಾಂಧಿ ಚೌಕ, ಮೈಸೂರು.

  • ಹೆಣ್ಣು ಬರೀ ಹೆಣ್ಣಲ್ಲ …..ಕವಿತೆ ಬರೆದ ಕವಿ ನಟರಾಜ ರವರಿಗೆ ಧನ್ಯವಾದಗಳು
    ಶ್ರೀಮತಿ ತನುಜಾ ಬಸವರಾಜ್ , ಕಲ್ಯಾಣನಗರ, ಬೆಂಗಳೂರು

  • ಹೆಣ್ಣು ಬರೀ ಹೆಣ್ಣಲ್ಲ ….ಈ ಜಗದ ಕಣ್ಣು…..ಕವಿತೆ ಬರೆದ ಕುಮಾರಕವಿ ನಟರಾಜ ರವರಿಗೆ ಧನ್ಯವಾದಗಳು ಶ್ರೀಮತಿ ತನುಜಾ ಬಸವರಾಜ್ , ಕಲ್ಯಾಣನಗರ, ಬೆಂಗಳೂರು

  • Superb poem on international women’s day written by NATRAJ sir 👏 👍. PREETHU VINAY, BHYRAVESHWARA NAGARA BENGALURU 560072

  • excellent and exciting poetry written by NATRAJ sir on INTERNATIONAL WOMEN’S DAY 👏 🙌 👌 😀
    Thanksgiving one 😋 BRUNDA RAGHAVAN, Rtd. SBI Sr. Manager, Indira Nagar, Bengaluru

  • excellent and exciting poetry written by NATRAJ sir on INTERNATIONAL WOMEN’S DAY 👏 🙌 👌 Thanks. BRUNDA RAGHAVAN, Rtd. SBI Sr. Manager, Indira Nagar, Bengaluru

  • ಮಹಿಳಾ ದಿನಾಚರಣೆ ಪ್ರಯುಕ್ತ ಕುಮಾರಕವಿಯವರು ಬರೆದಿರುವ ಹೆಣ್ಣು ಮಕ್ಕಳ ಬಗೆಗಿನ ಕವನವನ್ನು ಓದಿದ ನನಗೆ ತುಂಬ ಸಂತೋಷವಾಯ್ತು. ಎಲ್ಲರಿಗೂ ಧನ್ಯವಾದಗಳು, ಯಶೋಧಮ್ಮ, ನಿವೃತ್ತ ಮುಖ್ಯೋಪಾಧ್ಯಾಯಿನಿ ಸರ್ಕಾರಿ ಪ್ರೌಢಶಾಲೆ, ಚಿಕ್ಕಬಳ್ಳಾಪುರ. ನಮಸ್ಕಾರ

  • ಮಹಿಳಾ ದಿನಾಚರಣೆ ಪ್ರಯುಕ್ತ ಕುಮಾರಕವಿಯವರು ಬರೆದಿರುವ ಹೆಣ್ಣು ಮಕ್ಕಳ ಬಗೆಗಿನ ಕವನವನ್ನು ಓದಿದ ನನಗೆ ತುಂಬ ಸಂತೋಷವಾಯ್ತು. ಎಲ್ಲರಿಗೂ ಧನ್ಯವಾದಗಳು, ಯಶೋಧಮ್ಮ, ನಿವೃತ್ತ ಮುಖ್ಯೋಪಾಧ್ಯಾಯಿನಿ ಸರ್ಕಾರಿ ಪ್ರೌಢಶಾಲೆ, ಚಿಕ್ಕಬಳ್ಳಾಪುರ.

Leave a Reply

Translate to any language you want