LatestMysore

ಕೆ ಆರ್ ನಗರ ಟಿಎಪಿಎಸ್ಎಂಎಸ್ ನಿರ್ದೇಶಕರಿಂದ ಯತೀಂದ್ರ, ತನ್ವೀರ್ ಸೇಠ್ ರವರಿಗೆ ಸನ್ಮಾನ

ಕೆ. ಆರ್. ನಗರ(ಸಂಘಟನೆ ಮಂಜುನಾಥ್): ತಾಲೂಕು  ವ್ಯವಸಾಯೋತ್ಪನ   ಮಾರಾಟ ಸಹಕಾರ ಸಂಘದ ( ಟಿಎಪಿಎಸ್ಎಂಎಸ್ ) ನಿರ್ದೇಶಕರ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಂಘದ  ಎಲ್ಲಾ 12 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಜಯಭೇರಿ ಬಾರಿಸಿದ್ದರು. ಆ ಮೂಲಕ ಕೆ.ಆರ್.ನಗರದಲ್ಲಿ ಕಾಂಗ್ರೆಸ್ ಭದ್ರವಾಗಿದೆ ಎಂಬ ಸಂದೇಶವನ್ನು ರವಾನಿಸಲಾಗಿತ್ತು.

ಈ ಗೆಲುವಿನ ಹಿಂದೆ ಶಾಸಕ ಡಿ.ರವಿಶಂಕರ್ ಮತ್ತು ಕಾಂಗ್ರೆಸ್ ಮುಖಂಡರ  ಶ್ರಮವಿದ್ದು ಈ  ಗೆಲುವಿನ ಹಿನ್ನಲೆಯಲ್ಲಿ ನೂತನ ನಿರ್ದೇಶಕರು  ಮೈಸೂರು ಚಾಮರಾಜನಗರ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ. ಯತಿಂದ್ರ ಸಿದ್ರಾಮಯ್ಯ ಹಾಗೂ ಮೈಸೂರಿನ ಎನ್ ಆರ್ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರನ್ನು ಸನ್ಮಾನಿಸಿದರು.

ಈ ವೇಳೆ ಶಾಸಕರಾದ ಡಿ ರವಿಶಂಕರ್, ಟಿಎ ಪಿಎಸ್ಎಂ ಎಸ್ ನಿರ್ದೇಶಕರಾದ ಎಸ್. ಸಿದ್ದೇಗೌಡ, ಹೆಬ್ಬಾಳು  ನಾಗೇಂದ್ರ, ಎಚ್ ಪಿ ಪ್ರಶಾಂತ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಚೀರನ್ನಳ್ಳಿ  ಉಮೇಶ್ ಹಾಗೂ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

admin
the authoradmin

ನಿಮ್ಮದೊಂದು ಉತ್ತರ