janamanakannada > Blog > Latest > ಮಳವಳ್ಳಿಯಲ್ಲಿ ನವೀಕೃತ ಪದವಿ, ಪದವಿಪೂರ್ವ ಕಾಲೇಜಿನ ಕೊಠಡಿಗಳ ಉದ್ಘಾಟನೆ
ಮಂಡ್ಯ: ಮಳವಳ್ಳಿಯ ಭಗವಾನ್ ಬುದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ನವೀಕರಣ ಗೊಂಡ ಪದವಿ ಮತ್ತು ಪದವಿಪೂರ್ವ ಕಾಲೇಜಿನ ಕೊಠಡಿಗಳ ಉದ್ಘಾಟನೆಯನ್ನು ರಾಜವಂಶಸ್ಥರೂ, ಮೈಸೂರು ಕೊಡಗು ಸಂಸದರಾದ ಶ್ರೀ ಯದುವೀರ್ ಕೃಷ್ಣ ದತ್ತ ಒಡೆಯರ್ ನೆರವೇರಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು. ಪೂಜ್ಯ ಮನೋರಖ್ಖಿತ ಭಂತೇಜಿ, ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಯಮದೂರು ಸಿದ್ದರಾಜು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ವಿವೇಕಾನಂದ, ಬಿಜೆಪಿ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ರಘು ಕೌಟಿಲ್ಯ, ಆಗಮಿಸಿದ್ದರು. ಬಿಜೆಪಿ ಮಂಡ್ಯ ಜಿಲ್ಲಾಧ್ಯಕ್ಷರಾದ ಡಾ.ಇಂದ್ರೇಶ್, ಮುಖಂಡರಾದ ಶ್ರೀಶೈಲೇಂದ್ರ, ಮೈ ನಾ ಲೋಕೇಶ್ ಅಶೋಕ್ ಜಯರಾಂ ಮತ್ತಿತರರು ಉಪಸ್ಥಿತರಿದ್ದರು.
Tags:Malavalli news
admin








