ಯುವಜನರೇ, ಎಚ್ಚರ…! ಸತ್ಯವನ್ನು ಅರ್ಥಮಾಡಿಕೊಳ್ಳಿ.. ನಿಮ್ಮ ಹೆಸರಿನಲ್ಲಿ ರಾಜಕೀಯ ಆಟ!
ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-24

ಪ್ರಿಯ ದೇಶದ ಯುವ ಸ್ನೇಹಿತರೇ,
ನೀವು ಈ ದೇಶದ ಬೆನ್ನೆಲುಬು. ನಿಮ್ಮ ಕೈಯಲ್ಲಿದೆ ಭಾರತದ ಭವಿಷ್ಯ. ಆದರೆ ಇಂದು ನಿಮ್ಮ ಭವಿಷ್ಯದ ಹೆಸರಿನಲ್ಲಿ ಕೆಲವರು ರಾಜಕೀಯ ಆಟ ಆಡುತ್ತಿದ್ದಾರೆ. ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಈಗ ಅತ್ಯಂತ ಅಗತ್ಯವಾಗಿದೆ.
ನೀಟ್ ಪರೀಕ್ಷೆಯ ವಿಚಾರ ಬಂದಾಗ ಸಹಜವಾಗಿಯೇ ನಮ್ಮಲ್ಲಿ ಆತಂಕ, ಕೋಪ, ಪ್ರಶ್ನೆಗಳು ಹುಟ್ಟುತ್ತವೆ. ಲಕ್ಷಾಂತರ ವಿದ್ಯಾರ್ಥಿಗಳ ಕನಸು ಈ ಒಂದು ಪರೀಕ್ಷೆಯ ಮೇಲೆ ನಿಂತಿದೆ. ಆ ನೋವನ್ನು ನಾವು ಅಲ್ಲಗಳೆಯುವುದಿಲ್ಲ. ಆದರೆ ಈ ನೋವನ್ನು ಬಂಡವಾಳ ಮಾಡಿಕೊಂಡು ದೇಶದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತಿದೆ.

ಒಂದೆಡೆ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯದ ಹೆಸರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇನ್ನೊಂದೆಡೆ ಇದೇ ವಿಷಯವನ್ನು ನೆಪವಾಗಿಟ್ಟುಕೊಂಡು ದೇಶವನ್ನು ಅಸ್ಥಿರಗೊಳಿಸುವ ವ್ಯವಸ್ಥಿತ ಸಂಚು ರೂಪುಗೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದು ಕೇವಲ ವಿದ್ಯಾರ್ಥಿಗಳ ಸಮಸ್ಯೆಯಾಗಿ ಉಳಿದಿಲ್ಲ. ಇದು ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ.
“ಕಾಕ್ರೋಚ್ ಪಾರ್ಟಿ” ಎನ್ನುವ ಮುಖವಾಡದ ಹಿಂದೆ ಅಡಗಿ ಕೆಲವು ಶಕ್ತಿಗಳು ಕೆಲಸ ಮಾಡುತ್ತಿವೆ. ಅವರು ಯುವಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ. ಅರ್ಧಸತ್ಯ ಹೇಳಿ, ಸುಳ್ಳು ಸುದ್ದಿ ಹಬ್ಬಿಸಿ, ನಿಮ್ಮನ್ನು ರಸ್ತೆಗೆ ಇಳಿಸಿ ತಮ್ಮ ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದಾರೆ. ನಿಮಗೆ ಮೋಸವಾಗುತ್ತಿದೆ ಎಂಬ ಸತ್ಯದ ಜ್ಞಾನವೂ ನಿಮಗೆ ಆಗುತ್ತಿಲ್ಲ.

ಯೋಚಿಸಿ ನೋಡಿ. ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಯುವಕರಿಗಾಗಿ ಎಷ್ಟು ಕೆಲಸ ಮಾಡಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣದಲ್ಲಿ ಸುಧಾರಣೆ, ಸ್ಕಿಲ್ ಇಂಡಿಯಾ ಮೂಲಕ ಕೌಶಲ್ಯ ತರಬೇತಿ, ಸ್ಟಾರ್ಟ್ ಅಪ್ ಇಂಡಿಯಾ ಮೂಲಕ ಉದ್ಯೋಗ ಸೃಷ್ಟಿ, ಡಿಜಿಟಲ್ ಇಂಡಿಯಾ ಮೂಲಕ ಹೊಸ ಅವಕಾಶಗಳು. ಇವೆಲ್ಲವೂ ಯುವಕರ ಭವಿಷ್ಯಕ್ಕಾಗಿ.
ಆದರೆ ಈ ಎಲ್ಲಾ ಸಾಧನೆಯನ್ನು ನೇರವಾಗಿ ಎದುರಿಸಲು ಆಗದವರು ವಾಮಮಾರ್ಗ ಹಿಡಿದಿದ್ದಾರೆ. ಪರೀಕ್ಷೆಯಲ್ಲಿ ಸಣ್ಣ ಲೋಪವಾದರೆ ಅದನ್ನು ದೊಡ್ಡದಾಗಿ ಬಿಂಬಿಸಿ ಇಡೀ ವ್ಯವಸ್ಥೆಯ ಮೇಲೆ ಅಪನಂಬಿಕೆ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ತಪ್ಪು ನಡೆದರೆ ಕ್ರಮ ಆಗುತ್ತಿದೆ. ತನಿಖೆ ಆಗುತ್ತಿದೆ. ಆದರೆ ವ್ಯವಸ್ಥೆಯನ್ನೇ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ.

ಯುವಕರೇ, ನಿಮ್ಮ ಶಕ್ತಿ ಅಪಾರ. ನಿಮ್ಮ ಸಮಯ ಅಮೂಲ್ಯ. ಅದನ್ನು ಯಾರದೋ ರಾಜಕೀಯಕ್ಕಾಗಿ ವ್ಯರ್ಥ ಮಾಡಬೇಡಿ. ಪ್ರತಿಭಟಿಸುವ ಮೊದಲು ಸತ್ಯವನ್ನು ತಿಳಿದುಕೊಳ್ಳಿ. ಯಾರು ಮಾತಾಡುತ್ತಿದ್ದಾರೆ, ಅವರ ಹಿನ್ನೆಲೆ ಏನು, ಅವರ ಉದ್ದೇಶವೇನು ಎಂದು ಪರಿಶೀಲಿಸಿ. ನಾವು ವಿದ್ಯಾರ್ಥಿಗಳು. ನಮ್ಮ ಮೊದಲ ಕೆಲಸ ಓದುವುದು. ದೇಶ ಸೇವೆ ಮಾಡುವುದು. ವೈದ್ಯರಾಗಿ, ಇಂಜಿನಿಯರ್ ಆಗಿ, ಅಧಿಕಾರಿಯಾಗಿ ದೇಶವನ್ನು ಬೆಳೆಸುವುದು. ಭಾವನಾತ್ಮಕ ಪ್ರಚೋದನೆಗೆ ಬಲಿಯಾಗಿ ಯಾರದೋ ಕೈಗೊಂಬೆಯಾಗಬೇಡಿ.
ನೆನಪಿಡಿ. ಒಂದು ದೇಶ ಬಲವಾಗಿರಬೇಕಾದರೆ ಅದರ ಯುವಜನತೆ ಜಾಗೃತರಾಗಿರಬೇಕು. ಸುಳ್ಳಿಗೆ ಮಣಿಯದೆ, ಸತ್ಯದ ಪರ ನಿಲ್ಲಬೇಕು. ಟೀಕೆ ಮಾಡುವ ಹಕ್ಕು ನಮಗಿದೆ. ಆದರೆ ಆ ಟೀಕೆ ದೇಶ ಒಡೆಯಲು ಅಲ್ಲ, ದೇಶ ಕಟ್ಟಲು ಇರಬೇಕು. ಆದ್ದರಿಂದ ಯುವಜನರೇ ಎದ್ದೇಳಿ. ಪ್ರಶ್ನೆ ಕೇಳಿ, ಆದರೆ ದೇಶದ್ರೋಹಿಗಳ ಕೈಯಲ್ಲಿ ಆಟದ ಕಡ್ಡಿಯಾಗಬೇಡಿ. ಸತ್ಯದ ಪರ ನಿಲ್ಲಿ. ದೇಶದ ಪರ ನಿಲ್ಲಿ.

ನೆಲಜಿಯಿಂದ ಕಲಿಯದ ಪಾಠ.. ಮಡಿಕೇರಿಯತ್ತ ಬಿತ್ತು ವಕ್ರ ದೃಷ್ಠಿ.. ನಾಶದ ಮುನ್ನುಡಿ!
ನೆಲಜಿಯಿಂದ ಕಲಿಯದ ಪಾಠ.. ಮಡಿಕೇರಿಯತ್ತ ಬಿತ್ತು ವಕ್ರ ದೃಷ್ಠಿ.. ನಾಶದ ಮುನ್ನುಡಿ!







